Advertisement

ಚಾಲಕ ರಹಿತ ಕಾರುಗಳಿಗೆ ಸರಕಾರ ಅನುಮತಿ ನೀಡಲ್ಲ : ಗಡ್ಕರಿ

12:21 PM Jul 25, 2017 | udayavani editorial |

ಹೊಸದಿಲ್ಲಿ : ”ಭಾರತದ ರಸ್ತೆಗಳಲ್ಲಿ ಡ್ರೈವರ್‌ ರಹಿತವಾದ ಕಾರುಗಳ ಓಡಾಟಕ್ಕೆ  ಸರಕಾರ ಅನುಮತಿ ನೀಡುವುದಿಲ್ಲ; ಏಕೆಂದರೆ ಇದು ನಿರುದ್ಯೋಗಕ್ಕೆ ಕಾರಣವಾಗುತ್ತದೆ” ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿರುವ ನಿತಿನ್‌ ಗಡ್ಕರಿ ಹೇಳಿದ್ದಾರೆ. 

Advertisement

“ಉದ್ಯೋಗ ಸೃಷ್ಟಿಯೇ ನಮ್ಮ ಪರಮ ಆದ್ಯತೆ; ತರಬೇತಾದ ವಾಹನ ಚಾಲಕರಿಗೆ ಭಾರೀ ದೊಡ್ಡ ಉದ್ಯೋಗಾವಕಾಶವಿದೆ” ಎಂದು ಗಡ್ಕರಿ ಹೇಳಿದರು. 

“ನಿರುದ್ಯೋಗವೇ ತಾಂಡವವಾಡುತ್ತಿರುವ ದೇಶದಲ್ಲಿ ಉದ್ಯೋಗಗಳನ್ನು ಕಸಿದು ಕೊಳ್ಳುವ ತಾಂತ್ರಿಕತೆಯನ್ನು ಹೊಂದುವುದಕ್ಕೆ ಅವಕಾಶ ಇಲ್ಲ’ ಎಂದು ಗಡ್ಕರಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು. 

ಸಾಂಪ್ರದಾಯಿಕ ಪೆಟ್ರೋಲ್‌, ಡೀಸಿಲ್‌ ಇಂಧನಕ್ಕೆ ಪರ್ಯಾಯವಾಗಿ ವಿದ್ಯುತ್‌, ಎಥನಾಲ್‌, ಮಿಥೆನಾಲ್‌, ಬಯೋ ಡೀಸಿಲ್‌, ಸಿಎನ್‌ಜಿ ಮತ್ತು ಬಯೋಗ್ಯಾಸ್‌ ಇಂಧನಗಳನ್ನು ಸಾರ್ವಜನಿಕ ಸಾರಿಗೆಯಲ್ಲಿ ಬಳಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದ್ದು ಇದರಿಂದ ವಾಯು ಮಾಲಿನ್ಯ ತಡೆಯಲು ಸಾಧ್ಯವಾಗುವುದು ಎಂದು ಗಡ್ಕರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next