Advertisement

ಸರಕಾರ ಪೂರ್ಣಾವಧಿ ಪೂರೈಸಲಿದೆ: ಈಶ್ವರಪ್ಪ

10:09 AM Nov 01, 2019 | Sriram |

ಶಿವಮೊಗ್ಗ: ಬಿಜೆಪಿ ಸರಕಾರ ಪೂರ್ಣಾವಧಿ ಪೂರೈಸಲಿದೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರಕಾರಕ್ಕೆ ಬಹುಮತ ಇದೆ. ಮುಂಬರುವ ಉಪ ಚುನಾವಣೆಯಲ್ಲಿ ಎಲ್ಲ 15 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ. ಯಾರ ನೆರವೂ ಇಲ್ಲದೇ ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಈ ಬಗ್ಗೆ ಸಂಶಯವೇ ಬೇಡ ಎಂದರು.

ಬಿಜೆಪಿಗೆ ಬೆಂಬಲ ನೀಡುವ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸ್ವಾಗತಿಸುವುದಾಗಿ ಹೇಳಿದರು. ಆದರೆ ಬಿಜೆಪಿ ಸ್ಪಷ್ಟ ಬಹುಮತದಿಂದ ತನ್ನ ಪೂರ್ಣಾವಧಿ ಮುಗಿಸಲಿದ್ದು, ಈ ಬಗ್ಗೆ ಅನುಮಾನವೂ ಬೇಡ, ಯಾರ ನೆರವೂ ಬೇಡ. ಸದ್ಯ ರಾಜ್ಯದಲ್ಲಿ ಬಹುಮತದ ಸರಕಾರವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next