Advertisement

ನಿವೃತ್ತಿ ಅಂಚಿನಲ್ಲಿರುವ ಕೇಂದ್ರ ನೌಕರರಿಗೆ ಪಿಂಚಣಿ ಆ್ಯಪ್‌

03:03 PM Sep 19, 2017 | udayavani editorial |

ಹೊಸದಿಲ್ಲಿ : ಇದೀಗ ನಿವೃತ್ತಿಯ ಸನಿಹದಲ್ಲಿರುವ ಕೇಂದ್ರ ಸರಕಾರಿ ನೌಕರರಿಗೆ ತಮ್ಮ ಪೆನ್‌ಶನ್‌ ಮತ್ತಿತರ ಪ್ರಕರಣಗಳ ವಿಲೇವಾರಿ ಕುರಿತ ವಿಷಯಗಳ ತಾಜಾ ಮಾಹಿತಿಗಳನ್ನು  ಕೈಬೆರಳ ತುದಿಯಲ್ಲೇ ಪಡೆಯಲು ಅನುಕೂಲಿಸುವ ಮೊಬೈಲ್‌ ಅಪ್ಲಿಕೇಶನ್‌ ನಾಳೆ ಬುಧವಾರ ಬಿಡುಗಡೆಗೊಳ್ಳಲಿದೆ.

Advertisement

ಪೆನ್‌ಶನ್‌ ಲೆಕ್ಕಾಚಾರಗಳನ್ನು ತಿಳಿಯುವುದರೊಂದಿಗೆ ತಮ್ಮ ಯಾವುದೇ ದೂರುದುಮ್ಮಾನಗಳನ್ನು ಸರಕಾರಕ್ಕೆ ತಿಳಿಸಲು ಅನುಕೂಲವಿರುವ ಈ ನೂತನ ಆ್ಯಪ್‌ ನಿವೃತ್ತರಾಗಲಿರುವ ಕೇಂದ್ರ ಸರಕಾರಿ ನೌಕರರಿಗೆ ತುಂಬಾ ಪ್ರಯೋಜನಕಾರಿಯಾಗಬಲ್ಲುದು ಎಂದು ಸಿಬಂದಿ, ಸಾರ್ವಜನಿಕ ದೂರುಗಳು ಮತ್ತು ಪೆನ್‌ಶನ್‌ ಸಚಿವಾಲಯದ ಅಧಿಕೃತ ಪ್ರಕಟನೆ ತಿಳಿಸಿದೆ. 

ಸಿಬಂದಿ, ಸಾರ್ವಜನಿಕ ದೂರುಗಳು ಮತ್ತು ಪೆನ್‌ಶನ್‌ ಖಾತೆಯ ಕೇಂದ್ರ ಸಹಾಯಕ ಸಚಿವ ಜೀತೇಂದ್ರ ಸಿಂಗ್‌ ಅವರು ಈ ನೂತನ ಆ್ಯಪನ್ನು ನಾಳೆ ಬುಧವಾರ ಬಿಡುಗಡೆ ಮಾಡಲಿರುವರು. ಈ ಆ್ಯಪ್‌ ಈಗ ತತ್‌ಕ್ಷಣಕ್ಕೆ ನಿವೃತ್ತರಾಗಲಿರುವ ಕೇಂದ್ರ ಸರಕಾರದ ಸುಮಾರು 300ಕ್ಕೂ ಅಧಿಕ ನೌಕರರಿಗೆ ಪ್ರಯೋಜನವಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next