Advertisement

ಸಂಸತ್ತಿನಲ್ಲಿ ಮತ್ತೆ ತ್ರಿವಳಿ ತಲಾಕ್‌ ಮಸೂದೆ ಮಂಡನೆ: ಕಾನೂನು ಸಚಿವ

08:39 AM Jun 04, 2019 | Team Udayavani |

ಹೊಸದಿಲ್ಲಿ : ತ್ರಿವಳಿ ತಲಾಕ್‌ ಪದ್ಧತಿಯನ್ನು ನಿಷೇಧಿಸುವ ಮಸೂದೆಯನ್ನು ಸರಕಾರ ಪುನಃ ಸಂಸತ್ತಿನಲ್ಲಿ ಮಂಡಿಸಲಿದೆ ಎಂದು ಕಾನೂನು ಸಚಿವ ರವಿಶಂಕರ ಪ್ರಸಾದ್‌ ಇಂದು ಸೋಮವಾರ ಹೇಳಿದ್ದಾರೆ.

Advertisement

ಕಳೆದ ತಿಂಗಳಲ್ಲಿ 16ನೇ ಲೋಕಸಭೆಯ ವಿರ್ಸನೆಯೊಂದಿಗೆ ವಿವಾದಿತ ತ್ರಿವಳಿ ತಲಾಕ್‌ ಮಸೂದೆಯು, ರಾಜ್ಯ ಸಭೆಯಲ್ಲಿ ಪಾಸಾಗದೆ ಬಾಕಿ ಉಳಿದ ಕಾರಣ, ಅನೂರ್ಜಿತಗೊಂಡಿತ್ತು.

ರಾಜ್ಯಸಭೆಯಲ್ಲಿ ಮಂಡಿಸಲ್ಪಟ್ಟ ಮತ್ತು ಪಾಸಾಗಲು ಬಾಕಿ ಉಳಿದಿದ್ದ ಮಸೂದೆಯು, ಲೋಕಸಭೆಯ ವಿಸರ್ಜನೆಯೊಂದಿಗೆ ಅನೂರ್ಜಿತವಾಗುವುದಿಲ್ಲ. ಆದರೆ ಲೋಕಸಭೆಯಲ್ಲಿ ಪಾಸಾದ ಮತ್ತು ರಾಜ್ಯ ಸಭೆಯಲ್ಲಿ ಬಾಕಿ ಉಳಿದ ಮಸೂದೆ ಅನೂರ್ಜಿತವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next