Advertisement

ಶಿಕ್ಷಕರ ಪ್ರಶಸ್ತಿ: ಸ್ವಯಂ ಅರ್ಜಿ ಸಲ್ಲಿಕೆಗೆ ಅವಕಾಶ

06:00 AM Jun 21, 2018 | |

ಹೊಸದಿಲ್ಲಿ: ಇನ್ನು ಮುಂದೆ ಸರಕಾರಿ ಶಾಲೆಗಳ ಅಧ್ಯಾಪಕರು ಶಿಕ್ಷಕರ ರಾಷ್ಟ್ರೀಯ ಪ್ರಶಸ್ತಿಗಾಗಿ ಅರ್ಜಿಯನ್ನು ನೇರವಾಗಿ ಕೇಂದ್ರ ಸರಕಾರಕ್ಕೆ ಕಳುಹಿಸಬಹುದು. ಹೀಗೆಂದು ಕೇಂದ್ರ ಮಾನವ ಸಂಪದ ಅಭಿವೃದ್ಧಿ ಇಲಾಖೆ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಬುಧವಾರ ತಿಳಿಸಿದರು. ಆನ್‌ಲೈನ್‌ ವ್ಯವಸ್ಥೆಯಲ್ಲಿ ಸರಕಾರಿ ಶಾಲೆ ಶಿಕ್ಷಕರು ಅಥವಾ ಮುಖ್ಯ ಗುರುಗಳು ತಮ್ಮ ಬಗ್ಗೆ ಮಾಹಿತಿ ಅಪ್‌ಲೋಡ್‌ ಮಾಡಿಕೊಳ್ಳುವ ಅವಕಾಶ ಇದೆ. ಪ್ರತಿ ಜಿಲ್ಲೆಯಿಂದ 3 ಶಿಕ್ಷಕರನ್ನು, ಅಂತಿಮವಾಗಿ ಪ್ರತಿ ರಾಜ್ಯದಿಂದ 6 ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ. ಸ್ವತಂತ್ರ ಮಂಡಳಿ 50 ಮಂದಿ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡುತ್ತದೆ ಎಂದರು. ಕಳೆದ ವರ್ಷದವರೆಗೆ ರಾಜ್ಯ ಸರಕಾರಗಳ ಮೂಲಕ ಶಿಕ್ಷಕರನ್ನು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next