Advertisement
ಉಪ್ಪುಂದ: ಬಿಜೂರು ಮೂರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ದೈವಸ್ಥಾನದ ಬಳಿಯ ಶ್ರೀ ಸೀತಾರಾಮಚಂದ್ರ ದೇವಸ್ಥಾನದ (ಸಾರಸ್ವತ ಮಠ) ಹೆಬ್ಟಾಗಿನಲ್ಲಿ 1914ರಲ್ಲಿ ಆರಂಭಗೊಂಡ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಶತಮಾನೋತ್ಸವ ಕಂಡಿದೆ.
1976-77ರಲ್ಲಿ 5,6,7ನೇ ತರಗತಿ ಆರಂಭಗೊಂಡು ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಗೊಂಡಿತು. ಬಿಜೂರು ಗ್ರಾಮದ ಮೂರ್ಗೋಳಿಹಕ್ಲು, ಗರಡಿಸಾಲು, ದೊಂಬ್ಲಿಕೇರಿ, ಕಳಿಸಾಲು, ಶೆಟ್ರಕೇರಿ, ಹರ್ಕೆàರಿ, ಸಾಲಿಮಕ್ಕಿ, ದೀಟಿ ಮೊದಲಾದ ಪ್ರದೇಶಗಳಿಗೆ ಈ ಶಾಲೆಯೇ ಮೊದಲ ಪಾಠ ಶಾಲೆಯಾಗಿತ್ತು. ಮಕ್ಕಳ ಸಂಖ್ಯೆ ಅಧಿಕಗೊಂಡು ಊರಿನವರ ಸಹಕಾರದಿಂದ 5 ಕೊಠಡಿಗಳು ನಿರ್ಮಾಣಗೊಂಡವು. 10-12 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಶಿರೂರಿನ ಇಮಿ¤ಯಾಜ್ ಮತ್ತು ಸೋಮಯ್ಯ ಮಾಸ್ಟರ್ ಕಾಲದಲ್ಲಿ ತೆಂಗಿನ ಸಸಿ ಹಾಕಿ ಮಾಡಿರುವ ತೋಟ ಈಗಲೂ ನೋಡಬಹುದು.
Related Articles
1960ರಲ್ಲಿ ಹೆಲಿಕಾಪ್ಟರ್ವೊಂದು ದಾರಿ ತಪ್ಪಿ ವಿಶಾಲ ಮೈದಾನ ನೋಡಿ ಕೆಳಗೆ ಇಳಿಯಿತು. ಅದರಲ್ಲಿದ್ದವರು ಇಂಗ್ಲಿಷ್ ಮಾತನಾಡಿದಾಗ ಜನರು ಗಾಬರಿಗೊಂಡಿದ್ದರು. ಆಗ ಅವರೊಂದಿಗೆ ಇಂಗ್ಲಿಷ ಸಂವಾದ ನಡೆಸಿರುವುದು ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಪೊಲೀಸ್ ಅಧಿಕಾರಿ ಯಾಗಿದ್ದ (ಎಸ್ಐ) ಗೋವಿಂದಪ್ಪ. ಇದು ಮಿಲಿಟರಿಗೆ ಸಂಬಂಧಪಟ್ಟಿದು ಎಂದು ತಿಳಿಸಿದ್ದರು.
Advertisement
ಜಿಲ್ಲಾ ಕ್ರೀಡಾಂಗಣವಿಶಾಲ ಮೈದಾನ ಹೊಂದಿರುವುದರಿಂದ 2002ರಲ್ಲಿ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಕ್ರೀಡಾಂಗಣವೆಂದು ಘೋಷಣೆಯಾಗಿ ಜಿಲ್ಲಾ ಕ್ರೀಡಾಕೂಟ ನಡೆದಿತ್ತು. ಆಗ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಪ್ರಸ್ತುತ ಉಪ್ಪುಂದ ಪದವಿಪೂರ್ವ ಕಾಲೇಜು ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಶಾಲೆಗಳಿಗೆ ಕ್ರೀಡಾಕೂಟ ನಡೆಸುವ ಪ್ರಮುಖ ಮೈದಾನವಾಗಿದೆ. ಬಿಜೂರು ಶಾಲಾ ಮೈದಾನವು ಗಿನ್ನಿಸ್ ಪುಸ್ತಕದಲ್ಲಿ ಹೆಸರು ನಮೂದಿಸಿಕೊಂಡಿದೆ. ಧರ್ಮಸ್ಥಳ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ 2012-13ರಲ್ಲಿ ನಡೆದ ಗಿನ್ನಿಸ್ ದಾಖಲೆ ಯೋಗ ಶಿಬಿರದಲ್ಲಿ ಎರಡು ಸಾವಿರ ವಿದ್ಯಾರ್ಥಿಗಳ ಸಾಮೂಹಿಕ ಯೋಗ ಪ್ರದರ್ಶಿಸುವ ಮೂಲಕ ಕ್ರೀಡಾಂಗಣಕ್ಕೆ ವಿಶ್ವಮಾನ್ಯತೆ ತಂದುಕೊಟ್ಟಿದೆ. ಶಾಲೆಯು 105ನೇ ವರ್ಷದಲ್ಲಿದ್ದು ಹಳೆವಿದ್ಯಾರ್ಥಿಗಳ ಹಾಗೂ ಊರಿನವರ ಸಹಕಾರದಿಂದ ಶತಮಾನೋತ್ಸವದ ಆಚರಣೆಯ ಜತೆಗೆ ಅಭಿವೃದ್ಧಿಯ ಚಿಂತನೆ ನಡೆಯಬೇಕಿದೆ. ಶಾಲೆ ಉಳಿವಿಗೆ ಊರಿನವರ ಕಾಳಜಿ ಹೆಚ್ಚಿದೆ. ಆ ಕಾಲದಲ್ಲಿ ಶಾಲೆಗೆ ಅಗತ್ಯ ಕೊಠಡಿ, ಸೌಕರ್ಯಗಳನ್ನು ಊರಿನವರ ಸಹಕಾರದಿಂದ ಮಾಡಲಾಗುತ್ತಿತ್ತು. ಈಗಲೂ ಹಳೆ ವಿದ್ಯಾರ್ಥಿಗಳು, ಊರಿನವರು ಶಾಲೆಯ ಉಳಿವಿಗೆ ಕೈಜೋಡಿಸಬೇಕು.
-ವಿಶ್ವೇಶ್ವರಯ್ಯ ಅಡಿಗ,ಹಳೆವಿದ್ಯಾರ್ಥಿ ಹಾಗೂ ನಿವೃತ್ತ ಶಿಕ್ಷಕರು ನಿರ್ಮಾಣ ಹಂತದಲ್ಲಿರುವ ಶಾಲೆಯ ಒಂದು ಕಟ್ಟಡವು ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದ್ದು ಪೂರ್ಣಗೊಳ್ಳಬೇಕಿದೆ. ವಿಶಾಲ ಮೈದಾನವನ್ನು ಜಿಲ್ಲಾ ಮಾದರಿ ಕ್ರೀಡಾಂಗಣವಾಗಿ ರೂಪಿಸಬೇಕಿದೆ. ಕಂಪ್ಯೂಟರ್ ಕೊಠಡಿ ಹಾಗೂ ಪೀಠೊಪಕರಣಗಳ ಅಗತ್ಯವಿದೆ. ಇದಕ್ಕೆ ಇಲಾಖೆ ಹಳೆ ವಿದ್ಯಾರ್ಥಿಗಳ, ಊರಿನವರ ಸಹಕಾರ ಬೇಕು.
-ಅನಂತಪದ್ಮನಾಭ ಮಯ್ಯ,ಮುಖ್ಯಶಿಕ್ಷಕ -ಕೃಷ್ಣ ಬಿಜೂರು