Advertisement

ಅನುಕೂಲಕರ ರಫೇಲ್‌ ತೀರ್ಪಿಗಾಗಿ ಕೇಂದ್ರದಿಂದ ಕೋರ್ಟಿಗೆ ವಂಚನೆ:SC ಗೆ ಅರ್ಜಿದಾರರು

09:53 AM May 10, 2019 | Team Udayavani |

ಹೊಸದಿಲ್ಲಿ : ರಫೇಲ್‌ ಫೈಟರ್‌ ಜೆಟ್‌ ಕೇಸಿನಲ್ಲಿ ಕಳೆದ ವರ್ಷ ಡಿಸೆಂಬರ್‌ ನಲ್ಲಿ ಸುಪ್ರೀಂ ಕೋರ್ಟಿನಿಂದ ಅನುಕೂಲಕರ ತೀರ್ಪನ್ನು ಪಡೆಯಲು ಕೇಂದ್ರ ಸರಕಾರ ನ್ಯಾಯಾಲಯವನ್ನು ದಾರಿ ತಪ್ಪಿಸಿ ವಂಚಿಸಿದೆ ಎಂದು ಮಾಜಿ ಕೇಂದ್ರ ಸಚಿವರಾದ ಯಶವಂತ್‌ ಸಿನ್ಹಾ ಮತ್ತು ಅರುಣ್‌ ಶೌರಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಭೂಷಣ್‌ ಅವರು ಇಂದು ಗುರುವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು.

Advertisement

ಇಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಲಾಗಿರುವ ಪೂರಕ ಅಫಿದಾವಿತ್‌ ನಲ್ಲಿ ಅವರು “ಡಿಸೆಂಬರ್‌ 14ರ ರಫೇಲ್‌ ತೀರ್ಪನ್ನು ನ್ಯಾಯಾಲಯ ಪರಾಮರ್ಶಿಸಬೇಕು; ಏಕೆಂದರೆ ಆ ರೀತಿಯ ಅನುಕೂಲಕರ ತೀರ್ಪನ್ನು ಪಡೆಯುವ ಸಲುವಾಗಿ ಕೇಂದ್ರ ಸರಕಾರ ಅನೇಕ ಸತ್ಯಾಂಶಗಳನ್ನು ಮತ್ತು ಸಂಬಂಧಿತ ಮಾಹಿತಿಗಳನ್ನು ಮುಚ್ಚಿಟ್ಟು ನ್ಯಾಯಾಲಯದ ದಾರಿ ತಪ್ಪಿಸಿವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next