Advertisement

ರಫೇಲ್‌ ಡೀಲ್‌ ವೇಳೆ ಭಾರೀ ಲೋಪ: ಪಿ.ಚಿದಂಬರಂ

06:00 AM Aug 26, 2018 | |

ಕೋಲ್ಕತ್ತಾ: ರಫೇಲ್‌ ಡೀಲ್‌ಗಾಗಿ ಕೇಂದ್ರ ಸರ್ಕಾರ ರಕ್ಷಣಾ ಖರೀದಿ ಕಾರ್ಯವಿಧಾನವನ್ನು ನಿರ್ಲಕ್ಷಿಸಿದೆ ಹಾಗೂ ಅನೇಕ ಸಮಿತಿಗಳನ್ನು ಬೈಪಾಸ್‌ ಮಾಡಿದೆ ಎಂದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಟೀಕಿಸಿದ್ದಾರೆ.

Advertisement

ಈ ಯುದ್ಧ ವಿಮಾನ ಒಪ್ಪಂದದ ಕುರಿತು ವಿಸ್ತೃತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಶನಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುಪಿಎ ಅವಧಿಯಲ್ಲಿ ಪ್ರತಿ ವಿಮಾನಕ್ಕೆ ನಿಗದಿಪಡಿಸಿದ ಬೆಲೆ 526 ಕೋಟಿ ರೂ. ಆಗಿತ್ತು. ಆದರೆ ಎನ್‌ಡಿಎ ಅವಧಿಯ ಡೀಲ್‌ ವೇಳೆಗೆ 3 ಪಟ್ಟಿನಷ್ಟು ಹೆಚ್ಚಿತ್ತು, ಅಂದರೆ 1,670 ಕೋಟಿ ಆಗಿತ್ತು. ಈ ಕುರಿತು ಸಾರ್ವಜನಿಕ ಚರ್ಚೆ ನಡೆಯಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಈ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಸಂಪುಟದ ಭದ್ರತಾ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ. ಇದೊಂದು ಗಂಭೀರ ವಿಷಯವಾಗಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಈ ವಿಷಯವನ್ನೆತ್ತಿದ್ದರು. ಈ ಪ್ರಕರಣ ಸಂಬಂಧ ಅನೇಕ ಪ್ರಶ್ನೆಗಳಿವೆ. ಅವುಗಳಿಗೆ ಉತ್ತರ ಬೇಕಿದೆ ಎಂದೂ ಚಿದಂಬರಂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next