Advertisement

BJP ಕಚ್ಚತೀವು ವಿಷಯ ಬಳಸಿಕೊಂಡರೆ ಶ್ರೀಲಂಕಾದಲ್ಲಿ ತಮಿಳರಿಗೆ ಹಾನಿ: ಚಿದಂಬರಂ

08:41 PM Apr 06, 2024 | Team Udayavani |

ಚೆನ್ನೈ: ಇತ್ಯರ್ಥವಾಗಿರುವ ಕಚ್ಚತೀವು ಸಮಸ್ಯೆಯನ್ನು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಸಾಧನವಾಗಿ ಬಳಸಿಕೊಳ್ಳುವ ಬಿಜೆಪಿಯ ಪ್ರಯತ್ನವು ಫಲ ನೀಡುವುದಿಲ್ಲ ಮತ್ತು ಅದು ಆ ಪಕ್ಷದ ಸೋಲಿಗೆ ಕಾರಣವಾಗಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಶನಿವಾರ ಹೇಳಿದ್ದಾರೆ.

Advertisement

50 ವರ್ಷಗಳ ಹಿಂದೆ ಇತ್ಯರ್ಥವಾದ ಕಚ್ಚತೀವು ದ್ವೀಪದ ಸಮಸ್ಯೆಯನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದೆ ಎಂದು ಆರೋಪಿಸಿದ ಚಿದಂಬರಂ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಎಸ್ ಜೈಶಂಕರ್ ಅವರಿಗೆ ಕಚ್ಚತೀವು ಅಥವಾ ತಮಿಳರ ಬಗ್ಗೆ ಕಾಳಜಿ ಇದ್ದರೆ ತಮಿಳುನಾಡಿನಿಂದ ಏಕೆ ಸ್ಪರ್ಧಿಸಲಿಲ್ಲ? ಪ್ರಧಾನಿ ನರೇಂದ್ರ ಮೋದಿಯವರ ಹಿಂದೆ ಅಡಗಿ ಕೂತಿದ್ದು ಏಕೆ?’ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜಕೀಯ ಸಾಧನವಾಗಿ ಕಚ್ಚತೀವು ಬಳಸಿಕೊಂಡಲ್ಲಿ ಲಂಕಾದಲ್ಲಿ ನೆಲೆಸಿರುವ 25 ಲಕ್ಷ ಶ್ರೀಲಂಕಾ ತಮಿಳರು ಮತ್ತು 10 ಲಕ್ಷ ಭಾರತೀಯ ತಮಿಳರಿಗೆ ದೊಡ್ಡ ಹಾನಿ ಉಂಟುಮಾಡಲಿದೆ. ಕೇಂದ್ರ ಸಚಿವರ ಹೇಳಿಕೆಗಳು ಲಂಕಾ ಸರ್ಕಾರ ಮತ್ತು ದ್ವೀಪ ರಾಷ್ಟ್ರದಲ್ಲಿ ವಾಸಿಸುವ ತಮಿಳರ ನಡುವೆ ಘರ್ಷಣೆಗೆ ಕಾರಣವಾಗುತ್ತವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next