Advertisement

ಸರ್ಕಾರ ಸತ್ತುಹೋಗಿದೆ: ಕಿಡಿಕಾರಿದ ಸಿದ್ದರಾಮಯ್ಯ

10:14 AM Oct 14, 2019 | Team Udayavani |

ಚಿಕ್ಕಮಗಳೂರು: ಪ್ರವಾಹದಲ್ಲಿ 7000 ವಿದ್ಯಾರ್ಥಿಗಳ ಪಠ್ಯ ಪುಸ್ತಕ ನಾಶವಾಗಿವೆ. ಈವರೆಗೂ ಪಠ್ಯ ಪುಸ್ತಕ ಕೊಡುವ ಕೆಲಸ ಆಗಿಲ್ಲ. ಈ ಸರ್ಕಾರ ಸತ್ತು ಹೋಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Advertisement

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಜನರ ಕಷ್ಟ ನಾವು ಯಾರಿಗೆ ಹೇಳುವುದು.  ಈ ಸರ್ಕಾರಕ್ಕೆ ಕಣ್ಣು ಕಾಣಿಸುತ್ತಿಲ್ಲ, ಕಿವಿ ಕೇಳಿಸುತ್ತಿಲ್ಲ ಸರ್ಕಾರ ಬದುಕಿಲ್ಲ, ಸತ್ಯ ಹೋಗಿದೆ ಎಂದರು.

ಸುಮಾರು 2 ಕೋಟಿ ಜನ ಕರ್ನಾಟಕದಲ್ಲಿ ನಲುಗಿದ್ದಾರೆ ಮೋದಿಯವರಿಗೆ ಮಾತೃ ಹೃದಯ ಇರಬೇಕು. ಎದೆ ಎಷ್ಟು ಇಂಚು ಇದ್ರೆ ಏನು? ನೂರು ಇಂಚು ಎದೆ ಇಟ್ಟುಕೊಳ್ಳಿ ಜನರಿಗೆ ಸ್ಪಂದಿಸುವ ಮಾತೃ ಹೃದಯ ಇರಬೇಕು ಎಂದು ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next