Advertisement

ಸರ್ದಾರ್‌ ಪಟೇಲ್‌ ಹೆಸರಲ್ಲಿ ಏಕತಾ ಪ್ರಶಸ್ತಿ ಸ್ಥಾಪನೆ

10:26 AM Sep 27, 2019 | mahesh |

ನವದೆಹಲಿ: ದೇಶದ ಏಕತೆ ಮತ್ತು ಸಮಗ್ರತೆಗಾಗಿ ವಿಶೇಷ ಕೊಡುಗೆ ನೀಡುವವರಿಗಾಗಿ ವಿಶೇಷ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಸ್ಥಾಪಿಸಿದೆ. ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಹೆಸರಲ್ಲಿ ನೀಡಲಾಗುತ್ತದೆ.

Advertisement

ಚಿನ್ನದ ಪದಕ, ಪ್ರಶಸ್ತಿ ಪಲಕವನ್ನು ಪ್ರಶಸ್ತಿ ಒಳಗೊಳ್ಳಲಿದೆ. ನಗದು ಅನುದಾನ ಅಥವಾ ಪ್ರಶಸ್ತಿ ಮೊತ್ತ ಇರುವುದಿಲ್ಲ. ಜತೆಗೆ ಒಂದು ವರ್ಷದಲ್ಲಿ ಮೂವರಿಗೆ ಮಾತ್ರ ಅದನ್ನು ಪ್ರದಾನ ಮಾಡುವ ಪ್ರಸ್ತಾಪವಿದೆ. ಮರಣೋತ್ತರವಾಗಿ ಅದನ್ನು ನೀಡುವುದಿಲ್ಲ. ಆದರೆ ಕೆಲವೊಂದು ವಿಶೇಷ ಸಂದರ್ಭದಲ್ಲಿ ಮಾತ್ರ ಮರಣೋತ್ತರವಾಗಿ ನೀಡುವ ಅವಕಾಶ ಕಲ್ಪಿಸಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ. ಪ್ರತಿ ವರ್ಷದ ಅ.31ರಂದು ಸರ್ದಾರ್‌ ವಲಭಭಾಯ್‌ ಪಟೇಲ್‌ ಜನ್ಮದಿನದಂದು ಅದನ್ನು ಪ್ರದಾನ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next