Advertisement

ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಭಾಗ್ಯ; ಪಟ್ಟಿಯಿಂದ ರಾಯ್ ಬರೇಲಿ ಔಟ್!

01:20 PM Jun 23, 2017 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿಯ ಸ್ಮಾರ್ಟ್ ಸಿಟಿ ಯೋಜನೆಯ 3ನೇ ಹಂತದಲ್ಲಿ ಆಯ್ಕೆಯಾದ ನಗರಗಳ ಹೆಸರನ್ನು ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ.  ಕೇಂದ್ರ ಸಚಿವ ವೆಂಕಯ್ಯನಾಯ್ಡು ಪ್ರಕಟಿಸಿರುವ ಪಟ್ಟಿಯಲ್ಲಿ  ಕರ್ನಾಟಕದ ಬೆಂಗಳೂರು ಸೇರಿದಂತೆ 30 ನಗರಗಳು ಆಯ್ಕೆಯಾಗಿವೆ. 

Advertisement

ನೂತನ ಸ್ಮಾರ್ಟ್ ಸಿಟಿಯ ಪಟ್ಟಿಯಲ್ಲಿ ತಿರುವನಂತಪುರಂ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ತ್ರಿವೆಂಡ್ರಂ, ರಾಜ್ ಪುರ್, ಅಮರಾವತಿ, ಪಾಟ್ನ, ಕರೀಂನಗರ್, ಮುಝಾಫರ್ ಪುರ್, ಪಾಂಡಿಚೇರಿ, ಗಾಂಧಿನಗರ್, ಶ್ರೀನಗರ್, ಸಾಗರ್, ಕರ್ನಲ್, ಸಾಟ್ನಾ, ಬೆಂಗಳೂರು, ಶಿಮ್ಲಾ, ಡೆಹ್ರಾಡೂನ್, ತಿರುಪುರ್, ಪಿಂಪ್ರಿ ಚಿಂಚಾವಾಡ್, ಬಿಲಾಸ್ ಪುರ್, ಪಾಸಿಘಾಟ್, ಜಮ್ಮು, ದಾವೊದ್, ತಿರುನೆಲ್ವೇಲಿ, ತೂತುಕುಡಿ, ತಿರುಚಿರಾಪಳ್ಳಿ, ಜಾನ್ಸಿ, ಐಜಾವಲ್, ಅಲಹಾಬಾದ್, ಅಲಿಗಢ್, ಗ್ಯಾಂಗ್ ಟಕ್ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿರುವ ರಾಯ್ ಬರೇಲಿ ಕ್ಷೇತ್ರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಅವರು ಸ್ಮಾರ್ಟ್ ಸಿಟಿ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಸುಮಾರು 45 ನಗರಗಳು ಸ್ಪರ್ಧಿಸಿದ್ದು, ಇದರಲ್ಲಿ ಕೇವಲ 30ನಗರಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯ ಹಿನ್ನೆಲೆಯಲ್ಲಿ 30 ನಗರಗಳನ್ನು ಆಯ್ಕೆ ಮಾಡಲಾಗಿದ್ದು, ಒಟ್ಟು  57, 393 ಕೋಟಿ ರೂಪಾಯಿ ಹೂಡಿಕೆಯಾಗಲಿದೆ ಎಂದು ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next