Advertisement

ಅಭಿವೃದ್ಧಿಗೆ ಗೋವಿಂದರಾಜನಗರ ಮಾದರಿ

12:56 PM May 10, 2018 | Team Udayavani |

ಬೆಂಗಳೂರು: ಗೋವಿಂದರಾಜನಗರ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಕೃಷ್ಣ ಬುಧವಾರ ಡಾ.ರಾಜ್‌ ಕುಮಾರ್‌ ವಾರ್ಡ್‌ನಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು. ತಮಿಳುನಾಡು ಕಾಂಗ್ರೆಸ್‌ ಅಧ್ಯಕ್ಷ ತಿರುವಕರಸು ಹಾಗೂ ಮಾಜಿ ಸಚಿವ ವಿಶ್ವನಾಥನ್‌ ಅವರು ಪ್ರಿಯಕೃಷ್ಣ ಪರವಾಗಿ ಪ್ರಚಾರ ಮಾಡಿದರು. ಪ್ರಿಯಕೃಷ್ಣ ಅವರು ಯುವ ಶಾಸಕರಾಗಿ ಒಂಬತ್ತು ವರ್ಷಗಳಲ್ಲಿ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿಯಾಗಿ ಮಾಡಿದ್ದಾರೆ. ಬಡವರ ಪರ ಕಾರ್ಯಕ್ರಮ
ಕೈಗೊಂಡು ನೆರವಾಗಿದ್ದಾರೆ. ಹೀಗಾಗಿ, ಅವರನ್ನು ಮತ್ತೂಮ್ಮೆ ಆಶೀರ್ವದಿಸಿ ಎಂದು ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯಕೃಷ್ಣ , ಕ್ಷೇತ್ರದಲ್ಲಿ ನಿರಂತರ ಜನಸಂಪರ್ಕ ಸಾಧಿಸಿ ಕುಡಿಯುವ ನೀರು, ರಸ್ತೆ, ಶೌಚಾಲಯ ಸೇರಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿಸಿ ವೆಚ್ಚ ಮಾಡಲಾಗಿದೆ. ಗುಣಮಟ್ಟದ ಸೌಕರ್ಯಗಳನ್ನು ಜನರಿಗೆ ನೀಡಲಾಗಿದೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಮತ್ತೂಮ್ಮೆ ಆಶೀರ್ವಾದ ಮಾಡಿದರೆ ಕ್ಷೇತ್ರದ ಸಮಸ್ಯೆಗಳನ್ನು ನಿವಾರಿಸಿ ಜನತೆಗೆ ಉತ್ತಮ ಸೌಕರ್ಯ ಒದಗಿಸುವುದಾಗಿ ಭರವಸೆ ನೀಡಿದರು.ಪಾಲಿಕೆಯ ಮಾಜಿ ಸದಸ್ಯ ಶ್ರೀನಿವಾಸ್‌ ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next