Advertisement

ಸಚಿವ ಈಶ್ವರಪ್ಪ ಸಿಎಂ ವಿರುದ್ಧ ನೀಡಿರುವ ದೂರಿನ‌ ಬಗ್ಗೆ ನನಗೇನೂ ತಿಳಿಯದು –ಕಾರಜೋಳ

04:48 PM Apr 01, 2021 | Team Udayavani |

ವಿಜಯಪುರ: ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಿಎಂ ಯಡಿಯೂರಪ್ಪ ಹಸ್ತಕ್ಷೇಪ ಮಾಡಿದ್ದಾರೆಂದು ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದ ಬೆನ್ನಲ್ಲೇ, ಸಂಪುಟದ ಸಚಿವರು ಮತ್ತು ಬಿಜೆಪಿ ಶಾಸಕರು ಸಿಎಂ ಬೆನ್ನಿಗೆ ನಿಂತಿದ್ದಾರೆ.

Advertisement

ಈ ನಡುವೆ ಘಟನೆಯ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಗೋವಿಂದ ಕಾರಜೋಳ ತಮ್ಮ ಗಮನಕ್ಕೆ ತರದೇ  ಅನುದಾನ ಬಿಡುಗಡೆ, ಇಲಾಖೆಯಲ್ಲಿ ಸಿ.ಎಂ. ಯಡಿಯೂರಪ್ಪ ಹಸ್ತಕ್ಷೇಪದ ಕುರಿತು ಸಚಿವ ಈಶ್ವರಪ್ಪ ದೂರು ನೀಡಿರುವ ಕುರಿತು ನನಗೇನೂ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ಆಲಮಟ್ಟಿಗೆ ಭೇಟಿ ನೀಡಿದ್ದ ಕೇಂದ್ರ ಜಲ ಆಯೋಗದ ಇಬ್ಬರು ಅಧಿಕಾರಿಗಳು ರಸ್ತೆ ಅಪಘಾತದಲ್ಲಿ ಸಾವು

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು‌ ಕಳೆದ ಎರಡು ದಿನಗಳಿಂದ ಉಪ ಚುನಾವಣೆಯಲ್ಲಿ ಪಾಲ್ಗೊಂಡಿರುವ ನಾನು ನಿನ್ನೆ ಬೆಳಗಾವಿ ಪ್ರವಾಸದಲ್ಲಿ ಇದ್ದೆ. ಇದೀಗ ವಿಜಯಪುರ ಜಿಲ್ಲೆಯ ಪ್ರವಾಸದಲ್ಲಿ ಇದ್ದೇನೆ. ಹೀಗಾಗಿ ಸಚಿವ ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ದ ದೂರು ನೀಡಿದ್ದಾರೆ ಎಂಬ ಕುರಿತು ನನಗೇನೂ ತಿಳಿಯದು ಎಂದು ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next