Advertisement

ತಲಪಾಡಿ ಯಕ್ಷೋತ್ಸವದಲ್ಲಿ ಗೋವಿಂದ ಭಟ್ಟರಿಗೆ ಸಮ್ಮಾನ 

06:00 AM Nov 09, 2018 | |

ಗಡಿಭಾಗದಲ್ಲಿ ಯಕ್ಷಗಾನೀಯ ಚಟುವಟಿಕೆ ಗಳಲ್ಲಿ ತೊಡಗಿಸಿ ಯಕ್ಷಗಾನ ಕಂಪನ್ನು ಹರತ್ತಿರುವ ಯಕ್ಷಮಿತ್ರ ಸೇವಾ ಬಳಗ ತಲಪಾಡಿ ಇದರ 5 ನೇ ವರ್ಷದ ವಾರ್ಷಿಕೋತ್ಸವ ನ. 10ರಂದು ಸಂಜೆ 6.30 ರಿಂದ ಮುಂಜಾವು ತನಕ ತಲಪಾಡಿ ಟೋಲ್‌ ಗೇಟ್‌ ಬಳಿಯ ವೇದಿಕೆಯಲ್ಲಿ ಜರಗಲಿದೆ . ಹಿರಿಯ ಕಲಾವಿದ,ಯಕ್ಷಗುರು ಕೆ.ಗೋವಿಂದ ಭಟ್‌ ಸೂರಿಕುಮೇರು ಈ ಬಾರಿಯ ಸಮ್ಮಾನಕ್ಕೆ ಆಯ್ಕೆ ಆಗಿದ್ದಾರೆ . ತೆಂಕು ಬಡಗಿನ ಕಲಾವಿದರಿಂದ “ಕೀಚಕ ವಧೆ – ಕರ್ಣಪರ್ವ – ಕುಮಾರ ವಿಜಯ’ ಎಂಬ ಆಖ್ಯಾನಗಳ ಪ್ರದರ್ಶನವೂ ಜರಗಲಿದೆ . 

Advertisement

ಗೋವಿಂದ ಭಟ್‌ 
ಸೂರಿಕುಮೇರು ಗೋವಿಂದ ಭಟ್ಟರು ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಯಕ್ಷರಂಗದಲ್ಲಿ ಇರುವ ಸುಪ್ರಸಿದ್ಧ ಕಲಾವಿದರೆಲ್ಲರೂ ಭಟ್ಟರ ಶಿಷ್ಯರು. ಭಟ್ಟರು ಕುರಿಯ ವಿಠಲ ಶಾಸ್ತ್ರಿಗಳಲ್ಲಿ ಯಕ್ಷಗಾನ ಹೆಜ್ಜೆಗಳನ್ನು ಕಲಿತರು . ನಂತರ ಭರತನಾಟ್ಯ ಕಲಿತು 11ನೇ ವಯಸ್ಸಿನಲ್ಲೇ ಯಕ್ಷರಂಗ ಪ್ರವೇಶಿಸಿದರು .ಮೂಲ್ಕಿ , ಕೂಡ್ಲು , ಸುರತ್ಕಲ್‌ ,ಇರಾ ಮೇಳಗಳಲ್ಲಿ ತಿರುಗಾಟ ನಡೆಸಿ ಐದು ದಶಕಗಳಿಂದ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಕಲಾವಿದರಾಗಿ ಸೇವೆಗೈಯುತ್ತಿದ್ದಾರೆ . ಅರ್ಥಗಾರಿಕೆಯನ್ನು ಮಲ್ಪೆ ರಾಮದಾಸ ಸಾಮಗರಿಂದ ಅಭ್ಯಸಿಸಿರುವ ಭಟ್ಟರು ಸ್ತ್ರೀವೇಷ , ಪುಂಡುವೇಷ , ರಾಜವೇಷ , ಬಣ್ಣದವೇಷ , ಹಾಸ್ಯಪಾತ್ರ ಎಲ್ಲವನ್ನೂ ನಿರ್ವಹಿಸಬಲ್ಲ ಸವ್ಯಸಾಚಿ ಎನಿಸಿಕೊಂಡಿದ್ದಾರೆ . ಅವರ ಸುಭದ್ರೆ , ದ್ರೌಪದಿ , ಅಭಿಮನ್ಯು , ಬಬ್ರುವಾಹನ , ಶ್ರೀಕೃಷ್ಣ , ಶ್ರೀರಾಮ , ವಾಲಿ , ಕೌಂಡ್ಲಿಕ , ಕೌರವ , ಕಾರ್ತ್ಯ , ಜರಾಸಂಧ , ತಾಮ್ರಧ್ವಜ , ಅರ್ಜುನ , ಕರ್ಣ , ಭೀಷ್ಮ , ಭೌಮಾಸುರ , ಹನುಮಂತ , ಋತುಪರ್ಣ , ಗಣಮಣಿ , ಅಣ್ಣಪ್ಪ , ದಕ್ಷ ಮುಂತಾದ ಪಾತ್ರಗಳು ಅಪಾರ ಪ್ರಸಿದ್ಧಿ ಗಳಿಸಿವೆ .ತೆಂಕುತಿಟ್ಟಿನಲ್ಲಿ ಗದಾಯುದ್ಧ ಪ್ರಸಂಗದ ಕೌರವನ ಪಾತ್ರವನ್ನು ನಿರ್ವಹಿಸುವಲ್ಲಿ ಭಟ್ಟರನ್ನು ಮೀರಿಸುವವರಿಲ್ಲ ಎನ್ನಬಹುದು . 

  ಎಂ.ಶಾಂತರಾಮ ಕುಡ್ವ

Advertisement

Udayavani is now on Telegram. Click here to join our channel and stay updated with the latest news.

Next