Advertisement

ಬಿಎಸ್ ವೈ ಸರಕಾರ ಮೆಚ್ಚಿ ಜನಾದೇಶ: ಗೋವಿಂದ ಎಂ ಕಾರಜೋಳ

09:49 AM Dec 10, 2019 | keerthan |

ಬೆಂಗಳೂರು: ಉಪಚುನಾವಣೆಯಲ್ಲಿ  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರವನ್ನು ಮೆಚ್ಚಿ ಜನ‌ ಮನ್ನಣೆ ನೀಡಿ, ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಆಶಿರ್ವಾದ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಹೇಳಿದ್ದಾರೆ.

Advertisement

ಈ ಉಪ ಚುನಾವಣೆಯಲ್ಲಿ ವಿಜೇತರಾದ ಎಲ್ಲಾ ಬಿಜೆಪಿ‌ ಶಾಸಕರಿಗೆ ಅಭಿನಂದನೆಗಳು.  ಬಿಜೆಪಿ ಗೆಲುವಿಗೆ ಶ್ರಮಿಸಿದ ಪಕ್ಷದ  ಎಲ್ಲಾ ಮುಖಂಡರಿಗೆ, ಅಭಿಮಾನಿಗಳಿಗೆ‌, ಪಕ್ಷದ  ಕಾರ್ಯಕರ್ತರಿಗೆ  ಎಲ್ಲಾ ಮತದಾರರಿಗೆ  ಧನ್ಯವಾದಗಳು.  ಅವರಿಗೆ ಅಭಾರಿಯಾಗಿದ್ದೇನೆ ಎಂದರು.

ಬಿ.ಎಸ್.ಯಡಿಯೂರಪ್ಪ ಅವರು ಅತ್ಯುತ್ತಮ ಆಡಳಿತ ನೀಡಲು ಈ ಫಲಿತಾಂಶ ಮತ್ತಷ್ಟು ಪುಷ್ಟಿ ನೀಡಿದೆ.  ಎಲ್ಲಾ ಮತದಾರರಿಗೆ ನನ್ನ ಕೃತಜ್ಞತೆ ಗಳು ಎಂದು ಡಿಸಿಎಂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next