Advertisement

ದಿಲ್ಲಿಯಲ್ಲಿ ಮತ್ತೆ ಗವರ್ನರ್‌ Vs ಆಪ್‌

01:21 AM Jul 23, 2022 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ನವದೆಹ ಲಿಯ ಸರಕಾರದ ನೂತನ ಅಬಕಾರಿ ನೀತಿಯಲ್ಲಿ ಅನೇಕ ಕಾನೂನು ಉಲ್ಲಂಘನೆ ಯಾಗಿರುವು ದರ ಕುರಿತು ತನಿಖೆಗೆ ಅಲ್ಲಿನ ಲೆಫ್ಟಿನೆಂಟ್‌ ಗವರ್ನರ್‌ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಆದೇಶಿಸಿದ್ದಾರೆ. ಆ ಹಿನ್ನೆಲೆ ರಾಜ್ಯದಲ್ಲಿ ಲೆಫ್ಟಿ ನೆಂಟ್‌ ಗವರ್ನರ್‌ ವಿನಯ್‌ ಕುಮಾರ್‌ ಸಕ್ಸೇನಾ ಹಾಗೂ ಸರಕಾರದ ವಿರುದ್ಧ ಮತ್ತೊಂದು ಸುತ್ತಿನ ವಿವಾದ ಶುರುವಾಗಿದೆ.

Advertisement

ಕಳೆದ ವರ್ಷ ನವೆಂಬರ್‌ನಲ್ಲಿ ಜಾರಿಗೆ ಬಂದ ಅಬಕಾರಿ ನೀತಿಯನ್ನು, ಉನ್ನತ ಮಟ್ಟದ ರಾಜಕಾರಣಿಗಳಿಗೆ ಉಪ ಯೋಗ ವಾಗುವಂತೆ ರೂಪಿಸಿಕೊಳ್ಳಲಾಗಿದೆ. ಖಾಸಗಿ ಮದ್ಯ ಮಾರಾಟ ಗಾರರಿಗೆ ಲಾಭ ಮಾಡಿ ಕೊಡುವ ಮೂಲಕ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರಿಗೂ ಲಾಭವಾಗುವಂತೆ ಮಾಡಲಾಗಿದೆ.

ಅನೇಕ ಲೋಪದೋಷಗಳಿರುವ ನೀತಿಯ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸಕ್ಸೇನಾ ನೇರ ಆರೋಪ ಮಾಡಿ ದ್ದಾರೆ. ಈ ವಿಚಾರದಲ್ಲಿ ಎಎಪಿ ವಿರೋಧ ಹೊರಹಾಕಿದೆ. “ಲೆಫ್ಟಿನೆಂಟ್‌ ಗವರ್ನರ್‌ ಕೇಂದ್ರ ಸರಕಾರದ ಮಾರ್ಗ ದರ್ಶನ ದಂತೆ ಕೆಲಸ ಮಾಡುತ್ತಿದ್ದಾರೆ. ಪಂಜಾಬ್‌ನಲ್ಲಿ ನಾವು ಗೆದ್ದಿರುವುದು ಪ್ರಧಾನಿ ಮೋದಿ ಮತ್ತವರ ಪಕ್ಷಕ್ಕೆ ನಿದ್ದೆ ಗೆಡಿಸಿದೆ. ಹಾಗಾಗಿ ಅವರು ನಮ್ಮ ಮೇಲಿನ ಅಸೂಯೆ ಯಿಂದಾಗಿ ಈ ರೀತಿ ಮಾಡಿ ಸುತ್ತಿದ್ದಾರೆ’ ಎಂದು ಪಕ್ಷದ ವಕ್ತಾರ ಸೌರಭ್‌ ಭಾರದ್ವಾಜ್‌ ದೂರಿದ್ದಾರೆ.

“ಸುಳ್ಳುಗಾರ ಸಿಎಂ ಈಗ ವಂಚಕ’
ಲೆ.ಗವರ್ನರ್‌ ವಿನಯ್‌ ಕುಮಾರ್‌ ಸಕ್ಸೇನಾ ಅವರ ನಿರ್ಧಾರ ವನ್ನು ಬಿಜೆಪಿ ಸ್ವಾಗತಿಸಿದೆ. “ಸುಳ್ಳುಗಾರ ಸಿಎಂ ಈಗ ವಂಚಕರಾಗಿಯೂ ಕಾಣಿಸಿಕೊಂಡಿದ್ದಾರೆ’ ಎಂದು ದಿಲ್ಲಿ ಬಿಜೆಪಿ ಸಂಸದ ಗೌತಮ್‌ ಗಂಭೀರ್‌ ಹೇಳಿದ್ದಾರೆ. ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಕೂಡ ಮಾತನಾಡಿದ್ದು, “ನೂತನ ಅಬಕಾರಿ ನೀತಿಯು ದಿಲ್ಲಿಯ ಜನರಿಗೆ ಮಾಡುತ್ತಿರುವ ಮೋಸ’ ಎಂದಿದ್ದಾರೆ.

“ಮನೀಶ್‌ ಅತ್ಯಂತ ಪ್ರಾಮಾಣಿಕ’
ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ದಿಲ್ಲಿ ಸಿಎಂ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ ಅವರ ಪರವಾಗಿ ಬ್ಯಾಟ್‌ ಬೀಸಿದ್ದಾರೆ. “”ನಾನು ಈವರೆಗೆ ಕಂಡ ಅತ್ಯಂತ ಪ್ರಾಮಾಣಿಕ ವ್ಯಕ್ತಿಯೆಂದರೆ ಅದು ಸಿಸೋಡಿಯಾ ಮಾತ್ರ” ಎಂದು ತಿಳಿಸಿದರು. ಬಾರ್‌ಗಳ ಲೈಸನ್ಸ್‌ ನೀಡುವಿಕೆಯಲ್ಲಿ ಮನೀಶ್‌ ಸಿಸೋಡಿಯಾ ಅವರು ಲಂಚ ಪಡೆದಿದ್ದಾರೆ ಎಂದು ಲೆ. ಗವರ್ನರ್‌ ಅವರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅವರು, ಈಗಾಗಲೇ ಸತ್ಯೇಂದ್ರ ಜೈನ್‌ ಅವರನ್ನು ಜೈಲಿಗೆ ಕಳುಹಿಸುವ ಮೂಲಕ ಆಮ್‌ ಆದ್ಮಿ ಪಕ್ಷಕ್ಕೆ ಕೆಟ್ಟ ಹೆಸರು ತರಲು ಯತ್ನಿಸಿದ್ದೀರಿ. ಈಗ ಸಿಸೋಡಿಯಾ ಅವರನ್ನೂ ಜೈಲಿಗೆ ಕಳುಹಿಸಲು ಹುನ್ನಾರ ಮಾಡಿದ್ದೀರಿ” ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next