Advertisement

ಒಸಿಐ ವೀಸಾ ಕುರಿತ ಸಮಸ್ಯೆ ನಿವಾರಣೆಗೆ ಶೀಘ್ರವೇ ಕ್ರಮ: ಮುರಳೀಧರನ್‌

08:09 AM May 19, 2020 | Sriram |

ವಾಷಿಂಗ್ಟನ್‌: ಭಾರತದ ಸಾಗರೋತ್ತರ ನಾಗರಿಕರ (ಒಸಿಐ) ವೀಸಾ ನಿಯಮಗಳ ಕುರಿತಂತೆ ಇರುವ ಸಮಸ್ಯೆಗಳ ನಿವಾರಣೆಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿದೇಶಾಂಗ ಖಾತೆಯ ಸಹಾಯಕ ಸಚಿವ ವಿ.ಮುರಳೀಧರನ್‌ ಭರವಸೆ ನೀಡಿದ್ದಾರೆ.

Advertisement

ಅಲ್ಲದೆ, ಭಾರತದಲ್ಲಿ ಬಂಡವಾಳ ಹೂಡುವಂತೆ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಆಹ್ವಾನ ನೀಡಿದ್ದಾರೆ. ಕೋವಿಡ್ ಕ್ಕೆ ಸಂಬಂಧಿಸಿದಂತೆ ಭಾರತೀಯ-ಅಮೆರಿಕನ್ನರ ಜತೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಅವರು ಸಮಾಲೋಚನೆ ನಡೆಸಿದರು. ಈ ವೇಳೆ, ಒಸಿಐ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಹಲವರು ಪ್ರಶ್ನೆಗಳನ್ನು ಕೇಳಿದರು.ಒಸಿಐ ಕಾರ್ಡ್‌ ಹೊಂದಿದ ಮಕ್ಕಳಿರುವ ಭಾರತೀಯ ಮೂಲದವರಿಗೆ ಹಾಗೂ ಒಸಿಐ ಕಾರ್ಡ್‌ ಹೊಂದಿದ ಭಾರತೀಯ ಸಂಜಾತರಿಗೆ ತುರ್ತು ಕಾರಣಗಳಿಗಾಗಿ ಸಹ ಭಾರತಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಅವರ ದೀರ್ಘ‌ಕಾಲಿನ ವೀಸಾವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಇದೊಂದು ಮಲತಾಯಿ ಧೋರಣೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು. ಅವರ ಸಮಸ್ಯೆಯನ್ನು ಆಲಿಸಿದ ಸಚಿವರು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅರಿವಿದೆ. ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next