Advertisement

ಮುಳುಗಲಿದ್ದ ಐಎಲ್‌ ಆ್ಯಂಡ್‌ ಎಫ್ಎಸ್‌ಗೆ ಕೇಂದ್ರದ ಆಸರೆ

06:00 AM Oct 02, 2018 | Team Udayavani |

ಮುಂಬೈ: ಸಾಲದ ಸುಳಿಗೆ ಸಿಕ್ಕಿ ಮುಳುಗುವ ಹಂತಕ್ಕೆ ತಲುಪಿದ್ದ ಬ್ಯಾಂಕ್‌ಗಳಿಂದ ಪ್ರವರ್ತಿತವಾಗಿರುವ ಐಎಲ್‌ ಆ್ಯಂಡ್‌ ಎಫ್ಎಸ್‌ ಸಂಸ್ಥೆಯನ್ನು ಕೇಂದ್ರ ಸರ್ಕಾರ ಸೋಮವಾರ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಕುರಿತು ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಮುಂಬೈನಲ್ಲಿರುವ ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಪೀಠ ಅನುಮತಿ ನೀಡಿದೆ. 

Advertisement

ಅ.8ರೊಳಗೆ ಹೊಸ ಆಡಳಿತ ಮಂಡಳಿ ಸಭೆ ನಡೆಸಿ, ಅ.31ಕ್ಕೆ ಪ್ರಕರಣದ ಮುಂದಿನ ವಿಚಾರಣೆ ವೇಳೆ ಸಂಸ್ಥೆಯನ್ನು ಮುನ್ನಡೆಸುವ ಕಾರ್ಯಸೂಚಿ ಸಲ್ಲಿಸುವಂತೆ ಹೇಳಿದೆ. ಬಿಕ್ಕಟ್ಟಿಗೆ ಸಂಬಂಧಿಸಿ ಸರ್ಕಾರ ಎತ್ತಿರುವ ಪ್ರಶ್ನೆಗಳಿಗೆ ಅ.15ರ ಒಳಗೆ ಉತ್ತರಿಸುವಂತೆ ಐಎಲ್‌ ಆ್ಯಂಡ್‌ ಎಫ್ಎಸ್‌ಗೆ ನ್ಯಾಯಮಂಡಳಿ ಸೂಚಿಸಿದೆ. ಕೇಂದ್ರ ಸರ್ಕಾರ ರಚನೆ ಮಾಡಿರುವ ಹೊಸ ಆಡಳಿತ ಮಂಡಳಿಗೆ ಕೊಟಕ್‌ ಮಹೀಂದ್ರಾ ಬ್ಯಾಂಕ್‌ನ ಅಧ್ಯಕ್ಷ ಉದಯ್‌ ಕೊಟಕ್‌ ಮುಖ್ಯಸ್ಥರಾಗಿದ್ದಾರೆ. 

ಟೆಕ್‌ ಮಹೀಂದ್ರಾದ ಮಾಜಿ ಉಪಾಧ್ಯಕ್ಷ ವಿನೀತ್‌ ನಯ್ಯರ್‌, ಸೆಬಿ ಮಾಜಿ ಅಧ್ಯಕ್ಷ ಜಿ.ಎನ್‌.ಬಾಜಪೇಯಿ, ಐಸಿಐಸಿಐ ಬ್ಯಾಂಕ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷ ಜಿ.ಸಿ.ಚತುರ್ವೇದಿ, ಐಎಎಸ್‌ ಅಧಿಕಾರಿ ಮಾಲಿನಿ ಶಂಕರ್‌ ಮತ್ತು ನಿವೃತ್ತ ಅಧಿಕಾರಿ ನಂದಕಿಶೋರ್‌ ನೂತನ ಆಡಳಿತ ಮಂಡಳಿಯಲ್ಲಿ ಇರಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next