Advertisement
ಪಕ್ಷದ ಕಚೇರಿಯಲ್ಲಿ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ವೈ.ಎಸ್.ವಿ.ದತ್ತಾ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾನು ಎಲ್ಲ ನೋವನ್ನು ಸಹಿಸಿಕೊಂಡಿದ್ದೇನೆ. ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗದಂತೆ ನನ್ನ ಪ್ರಯತ್ನ ನಾನು ಮಾಡುತ್ತೇನೆ. ಆಮೇಲಿನದು ದೈವೇಚ್ಛೆ. ಆದರೆ, ಕಾಂಗ್ರೆಸ್ನಿಂದ ಮೈತ್ರಿ ಧರ್ಮ ಪಾಲನೆಯಾಗಬೇಕು’ ಎಂದು ತಿಳಿಸಿದರು.
Related Articles
Advertisement
ದತ್ತಾಗೆ ಶಹಬ್ಟಾಸ್ಗಿರಿ: ವ್ಯಕ್ತಿ ನಿಷ್ಠೆ, ಪಕ್ಷ ನಿಷ್ಠೆ ಇರುವಂತ ವ್ಯಕ್ತಿಯನ್ನು ನಾನು ನೋಡಿದ್ದರೆ ಅದು ದತ್ತಾ. ನನ್ನ ಕಷ್ಟ ಕಾಲದಲ್ಲಿ ಡಾ.ತಿಮ್ಮೇಗೌಡ, ದತ್ತಾ, ಉಗ್ರಪ್ಪ ಜತೆಗಿದ್ದರು. ನಾನು ಆತ್ಮಹತ್ಯೆ ಮಾಡಿಕೊಳ್ಳಬಹುದು ಅನ್ನೋ ಆತಂಕದಲ್ಲಿ ನನ್ನ ಜತೆ ಇರ್ತಿದ್ದರು. ನಂತರ, ಕೆಲವರು ಕಾಂಗ್ರೆಸ್ಗೆ ಹೋದರು. ಆದರೆ, ದತ್ತಾ ನನ್ನ ಬಿಟ್ಟು ಹೋಗಲಿಲ್ಲ ಎಂದು ದೇವೇಗೌಡರು ಶಹಬ್ಟಾಸ್ಗಿರಿ ನೀಡಿದರು.
ಪಕ್ಷ ಉಳಿಸಲು ದತ್ತಾಗೆ ಅಧಿಕಾರ ಕೊಟ್ಟಿದ್ದೇನೆ. ಮುಂದಿನ ಮೂರು ತಿಂಗಳಲ್ಲಿ ದತ್ತಾ ಕಡೂರಿಗೆ ಹೋಗಬಾರ್ದು. ಆಗ ಕಡೂರಿನ ಜನರೇ ಬಂದು ಎಳೆದುಕೊಂಡು ಹೋಗುತ್ತಾರೆ ಎಂದು ದತ್ತಾಗೆ ತಿಳಿಸಿದರು. ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಶಾಸಕರಾದ ಗೋಪಾಲಯ್ಯ, ಪರಿಷತ್ ಸದಸ್ಯರಾದ ಶರವಣ, ರಮೇಶ್ಗೌಡ, ಪರಿಷತ್ನ ಮಾಜಿ ಸದಸ್ಯ ರಮೇಶ್ಬಾಬು, ಮುಖಂಡರಾದ ಪ್ರಕಾಶ್, ಆರ್.ವಿ.ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ಇಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದೆ. ಲೋಕಸಭೆ ಚುನಾವಣೆ ಮೈತ್ರಿ ಸಂಬಂಧ ರಾಜಕೀಯ ನಿರ್ಣಯ ಕೈಗೊಳ್ಳಲಾಗುವುದು. ಕೇರಳ, ಉತ್ತರ ಪ್ರದೇಶ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ನಾವು ಸ್ಪರ್ಧೆ ಮಾಡಲಿದ್ದೇವೆ. ಬುಧವಾರ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ಮಂಡಳಿ ಬಳಿಕ ಮಹಾಧಿವೇಶನ ಸಹ ನಡೆಯಲಿದ್ದು, ಒಂದು ಲಕ್ಷ ಜನ ಸೇರಲಿದ್ದಾರೆ. ಕೇಂದ್ರ ಸರ್ಕಾರದ ವೈಫಲ್ಯಗಳು ಸೇರಿ ರಾಜಕೀಯ ಹಾಗೂ ಆರ್ಥಿಕ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ದೇವೇಗೌಡ ತಿಳಿಸಿದರು. ದತ್ತಾ ಬೇಡಿಕೆ: ನಾನು ಪ್ರಚಾರ ಸಮಿತಿ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುವೆ. ಆ ವಿಶ್ವಾಸವೂ ನನಗಿದೆ. ಆದರೆ, ನನಗೆ ಸ್ವಲ್ಪ ಸ್ವಾತಂತ್ರ್ಯ ಕೊಡಬೇಕು. ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಪದಾಧಿಕಾರಿಗಳ ನೇಮಕ ಸಂಬಂಧ ಪಕ್ಷ ನಿಷ್ಠರನ್ನು ಗುರುತಿಸಿ ಪಟ್ಟಿ ಮಾಡಿ ತರುತ್ತೇನೆ. ನೀವು ಒಪ್ಪಿಗೆ ನೀಡಬೇಕು ಎಂದು ಪ್ರಚಾರ ಸಮಿತಿ ಕಾರ್ಯ ಭಾರ ಸ್ವೀಕರಿಸಿದ ದತ್ತಾ ವೇದಿಕೆಯಲ್ಲೇ ದೇವೇಗೌಡರು ಹಾಗೂ ಎಚ್.ವಿಶ್ವನಾಥ್ಗೆ ಮನವಿ ಮಾಡಿಕೊಂಡರು. ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್ ಜತೆ ಚರ್ಚೆ ನಡೆದಿಲ್ಲ. ಆದರೂ, ಮೂರು ಕ್ಷೇತ್ರಗಳಲ್ಲಿ ಸ್ವಲ್ಪ ಜಗ್ಗಾಟ ಆಗಬಹುದು. ಉಳಿದಂತೆ ಎಲ್ಲವೂ ಸುಗಮ ಆಗಲಿದೆ.
– ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ