Advertisement

ಗ್ರಾಹಕರ ಆಯೋಗಗಳ ವ್ಯಾಜ್ಯ ಮೊತ್ತದ ಮಿತಿ ಬದಲಿಸಿದ ಕೇಂದ್ರ

11:47 PM Dec 30, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಗ್ರಾಹಕರ ಆಯೋಗಗಳಲ್ಲಿರುವ ಕೇಸ್‌ಗಳ ಸಂಖ್ಯೆ ಕಡಿಮೆಗೊಳಿಸಲು ಮತ್ತು ಕ್ಷಿಪ್ರವಾಗಿ ಪ್ರಕರಣಗಳ ವಿಲೇವಾರಿಯಾಗಲು ಅವುಗಳ ವ್ಯಾಪ್ತಿಯನ್ನು ವಿಸ್ತರಿಸಿ ಕೇಂದ್ರ ಸರಕಾರ‌ ಗುರುವಾರ ಆದೇಶ ಹೊರಡಿಸಿದೆ.

Advertisement

ಇದರಿಂದಾಗಿ ಜಿಲ್ಲಾ ಮಟ್ಟದಲ್ಲಿರುವ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ 50 ಲಕ್ಷ ರೂ. ವರೆಗಿನ ಸೇವೆ ಮತ್ತು ವಸ್ತುಗಳ ಖರೀದಿಯಲ್ಲಿ ಉಂಟಾಗಿರುವ ನ್ಯೂನ ತೆಗಳನ್ನು ಪರಿಶೀಲಿಸಿ, ತೀರ್ಮಾನ ಪ್ರಕಟಿಸಬಹುದು. ಸದ್ಯ ಇರುವ ನಿಯಮಗಳ ಅನ್ವಯ 1 ಕೋಟಿ ರೂ. ವರೆಗಿನ ದೂರು ಗಳನ್ನು ವಿಲೇವಾರಿ ಮಾಡಬಹುದು. ರಾಜ್ಯ ಮಟ್ಟದಲ್ಲಿನ ಗ್ರಾಹಕರ ಆಯೋಗ 50 ಲಕ್ಷ ರೂ.ಗಳಿಂದ 2 ಕೋಟಿ ರೂ. ವರೆಗಿನ ಮೌಲ್ಯದ ಸೇವೆಗಳಿಗೆ ಸಂಬಂಧಿಸಿದ ವ್ಯಾಜ್ಯಕ್ಕೆ ತೀರ್ಮಾನ ಪ್ರಕಟಿಸಬಹುದು.

ಇದುವರೆಗಿನ ನಿಯಮ ಪ್ರಕಾರ 1 ಕೋಟಿ ರೂ.ಗಳಿಂದ 10 ಕೋಟಿ ರೂ. ವರೆಗಿನ ಮೌಲ್ಯದ ಕೇಸ್‌ಗಳಿಗೆ ತೀರ್ಮಾನ ಪ್ರಕಟಿಸುತ್ತಿದ್ದವು. ಇನ್ನು ಹೊಸದಿಲ್ಲಿಯಲ್ಲಿ ರುವ ರಾಷ್ಟ್ರ ಮಟ್ಟದ ಗ್ರಾಹಕರ ಆಯೋಗ 2 ಕೋಟಿ ರೂ. ಮೌಲ್ಯಕ್ಕಿಂತ ಹೆಚ್ಚಿನ ವಸ್ತುಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಪರಿಶೀಲಿಸಿ ತೀರ್ಮಾನ ನೀಡಲಿದೆ. 2019ರಲ್ಲಿ ಜಾರಿಗೊಳಿಸಲಾಗಿದ್ದ ಗ್ರಾಹಕರ ಹಿತಾಸಕ್ತಿ ಕಾಯ್ದೆಯ ಅನ್ವಯ ಈ ನಿಯಮಗಳನ್ನು ಪರಿಷ್ಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next