Advertisement

ಸರ್ಕಾರ ಮುಂದುವರಿಯಲ್ಲ: ಕಾಗೇರಿ

11:41 PM Jun 29, 2019 | Team Udayavani |

ಹಾವೇರಿ: ಸಮ್ಮಿಶ್ರ ಸರ್ಕಾರ ಗೊಂದಲದ ಗೂಡಾಗಿದ್ದು, ಸರ್ಕಾರ ಮುಂದುವರಿಯುವುದಿಲ್ಲ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ನಗರದಲ್ಲಿ ಮಾತನಾಡಿ, ಮೈತ್ರಿ ನಾಯಕರ ಪರಸ್ಪರ ಕಚ್ಚಾಟದಿಂದ ಸರಕಾರ ಬೀಳುತ್ತೆ.

Advertisement

ಆಗ 105 ಶಾಸಕರಿರುವ ಬಿಜೆಪಿ ಸರ್ಕಾರ ರಚನೆಯಾಗುತ್ತದೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಇದನ್ನು ಹೇಳಲು ನಮಗೆ ಜನ 105 ಶಾಸಕರು, 26 ಸಂಸದರನ್ನು ಆಯ್ಕೆ ಮಾಡುವ ಮೂಲಕ ನೈತಿಕ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಗಟ್ಟಿಯಾಗಿದೆ. ಹೀಗಾಗಿಯೇ ಚಹಾ ಮಾರುತ್ತಿದ್ದ ಮೋದಿಯವರು ದೇಶದ ಪ್ರಧಾನಿಯಾಗಿದ್ದಾರೆ ಎಂದು ಬಿಜೆಪಿ ಸಂವಿಧಾನ ಬದ್ಧವಾಗಿ ಆಡಳಿತ ನಡೆಸುತ್ತಿದೆ. ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ. ವಂಶಪಾರಂಪರಿಕ ಆಡಳಿತಕ್ಕೆ ಜಗತ್ತಿಗೆ ಕಾಂಗ್ರೆಸ್‌ ಉತ್ತಮ ಉದಾಹರಣೆಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next