Advertisement

ಕಾರ್ಮಿಕರನ್ನು ಊರಿಗೆ ಕಳಿಸುವಲ್ಲಿ ಗೊಂದಲ ಸೃಷ್ಟಿಸಿದ ಸರ್ಕಾರ

05:55 AM May 12, 2020 | Team Udayavani |

ಕುಷ್ಟಗಿ: ರಾಜ್ಯದ ಒಂದೆರೆಡು ಲಕ್ಷ ಕಾರ್ಮಿಕರನ್ನು ಅವರ ಊರುಗಳಿಗೆ ಮಾನವೀಯತೆ ಹಿನ್ನೆಲೆಯಲ್ಲಿ ತಲುಪಿಸುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ವಿಷಯವಾಗಿರಲಿಲ್ಲ. ಆದರೂ ಕಾರ್ಮಿಕರನ್ನು ಅವರ ಊರುಗಳಿಗೆ ಕಳಿಸುವಲ್ಲಿ ಗೊಂದಲ ಸೃಷ್ಟಿಸಿತು ಎಂದು ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

Advertisement

ಸುರಪುರಕ್ಕೆ ಹೋಗುವ ಮಾರ್ಗದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಾರಿಗೆ ಬಸ್‌ಗಳು ಖಾಲಿ ಇದ್ದವು. ಚಾಲಕರಿಗೆ ಕೆಲಸ ಇರಲಿಲ್ಲ. ಡೀಸೆಲ್‌ ಖರ್ಚು ಮಾತ್ರ ಬರುತ್ತಿತ್ತು. ನಮ್ಮ ಪಕ್ಷದಿಂದ ಕೂಲಿಕಾರರ ಪ್ರಯಾಣ ದರ ಭರಿಸುವ ಪ್ರಸ್ತಾಪದಿಂದಾಗಿ ರಾಜ್ಯ ಸರ್ಕಾರ ವಿಧಿ ಇಲ್ಲದೇ ಉಚಿತ ಪ್ರಯಾಣಕ್ಕೆ ಅನುಮತಿ ನೀಡಿತು ಎಂದರು.

ಇಡೀ ದೇಶ ಮಹಾಮಾರಿ ಕೋವಿಡ್  ಸಂಕಷ್ಟದಲ್ಲಿರುವಾಗ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವ ಸರ್ಕಾರದ ನಡೆ ಖಂಡನೀಯ. ಲಾಕ್‌ಡೌನ್‌ ಜಾರಿಯಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿ ಕುಸಿದಿದ್ದು, ಆರ್ಥಿಕ ಚೇತರಿಕೆಗಾಗಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಸರ್ಕಾರಕ್ಕೆ ಮದ್ಯ ಮಾರಾಟದಿಂದ ಮೂಲ ಆದಾಯ ಬಂದರೂ, ಲಾಕ್‌ಡೌನ್‌ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಿತ್ತು. ನಮ್ಮ ಅಂದಾಜಿನಲ್ಲಿ ಲಾಕ್‌ಡೌನ್‌ ಮೇ ಅಂತ್ಯದವರೆಗೂ ಮುಂದೂಡಬೇಕಿತ್ತು. ಪ್ರತಿಯೊಂದು ರೋಗಕ್ಕೂ ಅಂತ್ಯ ಇದ್ದೆ ಇರುತ್ತದೆ. ಸಾರ್ವಜನಿಕರು ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಪಾಲಿಸಬೇಕು ಎಂದರು.

ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ, ಶೇಖರಗೌಡ ಮಾಲಿಪಾಟೀಲ ಮತ್ತೀತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next