Advertisement

ಭಕ್ತರಹಳ್ಳಿ ಅರಸೀಕೆರೆ ಯೋಜನೆಗೆ ಸರ್ಕಾರದ ಅನುಮೋದನೆ

08:14 AM May 21, 2019 | Suhan S |

ಚಿಕ್ಕಬಳ್ಳಾಪುರ: ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕುಡಿವ ನೀರಿನ ಸಂಕಷ್ಟ ಎದುರಿಸುವ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾ ಮಣಿಗೆ ಶಾಶ್ವತ ಕುಡಿವ ನೀರು ಒದಗಿಸುವ ನಿಟ್ಟಿ ನಲ್ಲಿ ರಾಜ್ಯ ಸರ್ಕಾರ ಮಹ ತ್ವದ ನಿರ್ಧಾರ ತೆಗೆದುಕೊಂಡು ಚಿಂತಾಮಣಿ ನಗರಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ ಭಕ್ತರಹಳ್ಳಿ ಅರಸೀಕೆರೆ ಕುಡಿಯುವ ಯೋಜನೆಗೆ ಗ್ರೀನ್‌ಸಿಗ್ನಲ್ ನೀಡಿದೆ.

Advertisement

ಚಿಂತಾಮಣಿ ನಗರದಿಂದ 13 ಕಿ.ಮೀ ದೂರ ದಲ್ಲಿರುವ ಭಕ್ತರಹಳ್ಳಿ ಅರಸೀಕೆರೆ ಸಣ್ಣ ನೀರಾ ವರಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಕೆರೆಯಿಂದ ಚಿಂತಾಮಣಿ ನಗರಕ್ಕೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸಿದ್ಧಪಡಿಸಿದ್ದ ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಯೋಜನೆ ಅನುಷ್ಠಾನಕ್ಕೆ ತಗು ಲುವ 10.59 ಕೋಟಿ ರೂ. ಅನುದಾನ ಬಿಡು ಗಡೆಗೂ ಸಹ ಆಡಳಿತಾತ್ಮ ಅನುಮೋದನೆ ಕೊಟ್ಟಿದೆ.

ಚಿಂತಾಮಣಿ ನಗರಸಭೆ ಜಿಲ್ಲೆಯಲ್ಲಿ ದೊಡ್ಡ ನಗರ, ವಾಣಿಜ್ಯ ಕೇಂದ್ರವಾಗಿ ಗಮನ ಸೆಳೆದಿದೆ. ಒಟ್ಟು 31 ವಾರ್ಡ್‌ ಹೊಂದಿರುವ ಚಿಂತಾಮಣಿ 80 ದಶಕದಲ್ಲಿಯೇ ಪುರಸಭೆಯಿಂದ ನಗರಸಭೆ ಯಾಗಿ ಮೇಲ್ದರ್ಜೇಗೇರಿದೆ. ಆದರೆ ಸದಾ ಬರ ಗಾಲಕ್ಕೆ ತುತ್ತಾಗುತ್ತಿರುವ ಜಿಲ್ಲೆಯಲ್ಲಿ ವರ್ಷ ದಿಂದ ವರ್ಷಕ್ಕೆ ಕುಡಿಯುವ ನೀರಿನ ಸಂಕಷ್ಟ ಹೆಚ್ಚಾಗಿದೆ.

ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಚಿಂತನೆ: ಚಿಂತಾಮಣಿ ನಗರಕ್ಕೆ ಯಾವುದೇ ಶಾಶ್ವತ ನದಿ ಅಥವಾ ಜಲಾಶಯಗಳು ಇಲ್ಲದೇ ಪ್ರತಿ ವರ್ಷದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮೊದಲ ಬಾರಿಗೆ 2013ರಲ್ಲಿ ಶಾಸಕರಾಗಿ ಆಯ್ಕೆಗೊಂಡ ಸಂದರ್ಭದಲ್ಲಿ ಚಿಂತಾಮಣಿ ನಗರಕ್ಕೆ ಶಾಶ್ವತ ಕುಡಿವ ನೀರು ಕಲ್ಪಿಸುವ ದಿಸೆಯಲ್ಲಿ ಚಿಂತನೆ ನಡೆಸಿದ್ದರು.

ನಗರದಿಂದ ಬಾಗೇಪಲ್ಲಿ ರಸ್ತೆಯಲ್ಲಿ ಬರುವ ಭಕ್ತರಹಳ್ಳಿ ಅರಸೀಕೆರೆಯಿಂದ ನಗರಕ್ಕೆ ನೀರು ತಂದರೆ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆ ಹರಿಯುತ್ತದೆ ಎಂದು ಹೇಳಿ ಮೊದಲಿಗೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದ್ದ ಕೆರೆಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೆಂಗಳೂರು ಇವರಿಗೆ ಹಸ್ತಾಂತರಿಸ ಲಾಗಿತ್ತು.

Advertisement

ಇದೀಗ ಭಕ್ತರಹಳ್ಳಿ ಅರಸೀಕೆರೆಯಿಂದ ಚಿಂತಾ ಮಣಿ ನಗರಕ್ಕೆ ನೀರು ಸರಬರಾಜು ಮಾಡಲು ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸಲ್ಲಿಸಿದ್ದ ಸಮಗ್ರ ಯೋಜನಾ ವರದಿಗೆ ಸರ್ಕಾರ ಅನುಮೋದನೆ ನೀಡಿರುವುದರ ಜೊತೆಗೆ ಕಾಮಗಾರಿಗೆ ತಗ ಲುವ 10.59 ಕೋಟಿ ರೂ. ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಮೂಲಕ ಚಿಂತಾ ಮಣಿ ನಗರದ ಜನರ ಬಹುದಿನಗಳ ಕನಸಿಗೆ ಸ್ಪಂದಿಸಿದೆ.

ನಗರೋತ್ಥಾನದಡಿ ಅನುದಾನ ಮೀಸಲು: ಈಗಾಗಲೇ ಭಕ್ತರಹಳ್ಳಿ ಅರಸೀಕೆರೆ ಯೋಜನೆ ಯನ್ನು ಅನುಷ್ಠಾನಗೊಳಿಸಲು ನಗರೋತ್ಥಾನ ಮೂರನೇ ಹಂತದಲ್ಲಿ ಚಿಂತಾಮಣಿ ನಗರ ಸಭೆಯು 2.25.00 ಲಕ್ಷಗಳ ಕ್ರಿಯಾ ಯೋಜ ನೆಗೆ ರಾಜ್ಯ ಪೌರಾಡಳಿತ ನಿರ್ದೇಶಕರು ಅನು ಮೋದನೆ ನೀಡಿದ್ದಾರೆ.

ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಮುಖ್ಯ ಅಭಿಯಂತರರು ಜಿಲ್ಲೆಯ ಚಿಂತಾಮಣಿ ನಗರಕ್ಕೆ ಭಕ್ತರಹಳ್ಳಿ, ಅರಸೀಕೆರೆ ಮೂಲದಿಂದ ನೀರು ಸರಬರಾಜು ಮಾಡಲು ಒಟ್ಟು 10.59 ಅಂದಾಜು ಪಟ್ಟಿ ಯನ್ನು ತಾಂತ್ರಿಕವಾಗಿ ಪರಿಶೀಲನೆ ನಡೆಸಿದ್ದರು. ಆದರೆ ರಾಜ್ಯ ಸರ್ಕಾರ 2015-16ನೇ ಸಾಲಿನ ಮಂಡಳಿತ ದರ ಪಟ್ಟಿ, 2016-17ನೇ ಸಾಲಿನ ಲೋಕೋಪಯೋಗಿ ಇಲಾಖೆ ದರಪಟ್ಟಿ ಮತ್ತು ಮಾರುಕಟ್ಟೆ ದರಗಳನ್ನು ಆಧರಿಸಿ ರಾಜ್ಯ ಪೌರಾಡಳಿತ ಸಚಿವರ ಅಧ್ಯಕ್ಷತೆಯಲ್ಲಿ ಕಳೆದ 2017ರ ಅಕ್ಟೋಬರ್‌ ತಿಂಗಳ 20 ರಂದು ನಡೆದ ಸಭೆಯಲ್ಲಿ 1095.00 ಲಕ್ಷಗಳಿಗೆ ಮಿತಿಗೊಳಿಸಲಾಗಿದೆ. ಯೋಜನಾ ವೆಚ್ಚಕ್ಕಿಂತ ಕಾಮಗಾರಿಗೆ ಹೆಚ್ಚುವರಿಯಾದಲ್ಲಿ ಚಿಂತಾಮಣಿ ನಗರಸಭೆಯೇ ತನ್ನ ಸ್ವಂತ ಅನುದಾನದಲ್ಲಿ ನಿಯಮಾನುಸಾರ ಭರಿಸಬೇಕೆಂದು ರಾಜ್ಯ ಸಚಿವ ಸಂಪುಟ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next