Advertisement

40 ಲಕ್ಷ ಟನ್‌ ಸಕ್ಕರೆ ದಾಸ್ತಾನಿಗೆ ಅಸ್ತು

11:35 AM Jul 25, 2019 | mahesh |

ಹೊಸದಿಲ್ಲಿ: ಪ್ರಸಕ್ತ ವರ್ಷದಲ್ಲಿ 40 ಲಕ್ಷ ಟನ್‌ಗಳಷ್ಟು ಸಕ್ಕರೆಯ ಮುಂಜಾಗ್ರತೆಯ ಸಂಗ್ರಹ ಣೆಗೆ (ಬಫ‌ರ್‌ ಸ್ಟಾಕ್‌) ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಕೇಂದ್ರ ಆಹಾರ ಇಲಾಖೆ ಸಲ್ಲಿಸಿದ್ದ ಈ ಪ್ರಸ್ತಾವನೆಯನ್ನು, ಕೇಂದ್ರ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿಯು (ಸಿಸಿಇಎ) ಬುಧವಾರ ಅಂಗೀಕರಿಸಿದೆ.

Advertisement

ಈ ಮೂಲಕ, ಸಕ್ಕರೆಗೆ ಉತ್ತಮ ಬೆಲೆ ಬರುವಂತೆ ಮಾಡಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಿರುವ ಬಾಕಿ ಮೊತ್ತವನ್ನು ಆದಷ್ಟು ಬೇಗನೇ ಪಾವತಿಸಲು ಅನುಕೂಲ ಕಲ್ಪಿಸಲಾಗಿದೆ. ದೇಶದ ನಾನಾ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಬಾಕಿಯು 15,000 ಕೋಟಿ ರೂ. ದಾಟಿದ್ದು, ಸರಕಾರದ ಹೊಸ ನಿರ್ಧಾರ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ಇದೇ ವೇಳೆ, ಕಬ್ಬಿಗೆ ನೀಡಲಾಗುತ್ತಿದ್ದ ಕನಿಷ್ಠ ಬೆಂಬಲ ಬೆಲೆಯನ್ನು (ಪ್ರತಿ ಟನ್‌ಗೆ 275 ರೂ.) ಈ ವರ್ಷವೂ ಮುಂದು ವರಿಸಿಕೊಂಡು ಹೋಗುವ ನಿರ್ಧಾರ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next