Advertisement

ಸಾರ್ವಜನಿಕರ ಸಹಭಾಗಿತ್ವದಲ್ಲಿ ಆಡಳಿತ

02:58 PM Dec 27, 2020 | Suhan S |

ಮುಳಗುಂದ: ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಅನ್ನು ತಿದ್ದುಪಡಿ ಮಾಡಿ ಕರ್ನಾಟಕ ಪೌರಸಭೆಗಳ ಅಧ್ಯಾಯ 111-ಎ ರಂತೆ 2020 ಜಾರಿ ಅನ್ವಯ ನೆರೆ ಹೊರೆ ಗುಂಪು, ಪ್ರದೇಶ ಸಭಾ, ವಾರ್ಡ್‌ ಸಮಿತಿ ರಚನೆ ಅನುಷ್ಠಾನ ಕಾರ್ಯಕ್ರಮ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಳಗುಂದ ಪಪಂ ಪ್ರಥಮ ಹೆಜ್ಜೆಯಲ್ಲಿ ಅನುಷ್ಠಾನಗೊಳಿಸುವ ಕಾರ್ಯಕ್ರಮಕ್ಕೆ ಇಲ್ಲಿನ ಎಪಿಎಂಸಿ ಆವರಣದಲ್ಲಿ ಶಾಸಕ ಎಚ್‌.ಕೆ. ಪಾಟೀಲ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂವಿಧಾನ ರಚನೆಯಿಂದಾಗಿ ದೇಶದ ಜನರ ಜೀವನ ಮಟ್ಟ ಸುಧಾರಣೆಯಾದಂತೆ ಪೌರಸಭೆ ಅಧಿನಿಯಮ ತಿದ್ದುಪಡಿಯಿಂದ ಸಾರ್ವಜನಿಕರ ಸಹಭಾಗಿತ್ವದಲ್ಲಿ ಪಾರದರ್ಶಕತೆ, ಅಭಿವೃದ್ಧಿಯ ದೃಷ್ಟಿಯಿಂದ ರಚನಾತ್ಮಕ ಬದಲಾವಣೆ ಪಟ್ಟಣದಪ್ರದೇಶದಲ್ಲಿ ಸಾಧ್ಯವಿದೆ. ನೆರೆ ಹೊರೆ ಗುಂಪು,ಪ್ರದೇಶ ಸಭೆ ಹಾಗೂ ವಾರ್ಡ್‌ ಸಮಿತಿಗಳಮೂಲಕ ಸ್ವತ್ಛತೆ ಸೇರಿದಂತೆ ಹಲವಾರುಸಾರ್ವಜನಿಕರ ಕುಂದು ಕೊರತೆಗಳನ್ನುಸ್ಥಳೀಯ ಮಟ್ಟದಲ್ಲಿ ನಿವಾರಿಸುವುದು ಹಾಗೂ ಅಗತ್ಯ ಸೌಲಭ್ಯಗಳನ್ನು ವಾರ್ಡ್‌ ಸಭೆಗಳ ಮೂಲಕ ಕ್ರಿಯಾಯೋಜನೆ ರೂಪಿಸುವ ಕ್ರಾಂತಿಕಾರಕ ಕಾಯ್ದೆ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಮಾಜಿ ಶಾಸಕ ಡಿ.ಆರ್‌. ಪಾಟೀಲ ಮಾತನಾಡಿ, ನೂತನವಾಗಿ ಜಾರಿಯಾದಪೌರಸಭೆ ಕಾಯ್ದೆ ರಾಜ್ಯದ ಪ್ರತಿಜಿಲ್ಲೆಗಳಲ್ಲಿಯೂ ಆಯಾ ಜಿಲ್ಲಾಧಿಕಾರಿಗಳಮೂಲಕ ಅನುಷ್ಠಾನಗೊಳಿಸಲುಸರ್ಕಾರ ಆದೇಶ ನೀಡಿದ್ದು, ನೆರೆ ಹೊರೆಗುಂಪು ರಚನೆಯಿಂದ ಸಾರ್ವಜನಿಕರಿಗೆ ಸದಸ್ಯರಷ್ಟೆ ಎಲ್ಲ ಬಗೆಯ ಅಧಿಕಾರ ದೊರೆಯುವಂತಾಗಿದೆ. ಸಾರ್ವಜನಿಕರು ಇಂಥ ಮಹತ್ತರ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಯೋಜನೆ ಯಶಸ್ವಿಗೊಳಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ಅನುಷ್ಠಾನಗೊಳ್ಳುತ್ತಿರುವ ಮುಳಗುಂದ ಮಾದರಿ ಗ್ರಾಮವಾಗಿ ಬೆಳವಣಿಗೆ ಹೊಂದಬೇಕು ಎಂದರು.

ಆರ್‌.ಎನ್‌. ದೇಶಪಾಂಡೆ, ಸಿದ್ದು ಪಾಟೀಲ, ಎಸ್‌.ಎಂ. ನೀಲಗುಂದ, ಬಿ.ವಿ. ಸುಂಕಾಪುರ ಸೇರಿದಂತೆ ಇತರರು ಇದ್ದರು. ಎಂ.ಎಸ್‌. ಬೆಂತೂರ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next