Advertisement

ಉ.ಪ್ರ: 37 IAS ಅಧಿಕಾರಿಗಳು ವರ್ಗ, ವಿವಾದಿತ ಗೋರಖ್‌ಪುರ DMಗೆ ಭಡ್ತಿ

05:50 PM Mar 17, 2018 | udayavani editorial |

ಲಕ್ನೋ : ಅತ್ಯಂತ ಪ್ರತಿಷ್ಠೆಯ ಗೋರಖ್‌ಪುರ, ಫ‌ೂಲ್‌ಪುರ ಸಂಸದೀಯ ಉಪ ಚುನಾವಣೆಗಳನ್ನು ಸೋತು ತೀವ್ರ ಮುಖಭಂಗಕ್ಕೆ ಗುರಿಯಾಗಿರುವ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರಕಾರ 16 ಜಿಲ್ಲಾ ಮ್ಯಾಜಿಸ್ಟ್ರೇಟರುಗಳು ಸೇರಿದಂತೆ ಒಟ್ಟು  37 ಐಎಎಸ್‌ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ.

Advertisement

ವಿಶೇಷವೆಂದರೆ ಮತ ಎಣಿಕೆ ಕೇಂದ್ರದೊಳಗೆ ಪತ್ರಕರ್ತರನ್ನು ಬರದಂತೆ ತಡೆಯುವ ಮೂಲಕ ವಿವಾದಕ್ಕೆ ಗುರಿಯಾದ ಗೋರಖ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್‌ ರಾಜೀವ್‌ ರೌತೇಲ ಅವರಿಗೂ ವರ್ಗಾವಣೆಯಾಗಿದ್ದು ಅವರಿಗೆ ದೇವಿಪಟನ್‌ ಡಿವಿಜನಲ್‌ ಕಮಿಷನರ್‌ ಆಗಿ ಭಡ್ತಿಯನ್ನೂ ನೀಡಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಂದ ತೆರವಾಗಿದ್ದ ಗೋರಖ್‌ಪುರ ಸಂಸದೀಯ ಕ್ಷೇತ್ರವನ್ನು ಹಲವು ದಶಕಗಳ ಬಳಿಕ ಬಿಜೆಪಿ ಕೈಯಿಂದ ಸಮಾಜವಾದಿ ಪಕ್ಷ ಕಿತ್ತುಕೊಂಡಿರುವುದು ಬಿಜೆಪಿಗೆ ಭಾರೀ ಮುಖಭಂಗವಾಗಿದೆ.  

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next