Advertisement

ಗೋಪಾಲಪುರ: ವಿಕಲಚೇತನರಿಗೆ ಸಲಕರಣೆಗಳ ವಿತರಣೆ

08:27 PM Jul 12, 2019 | Team Udayavani |

ಶನಿವಾರಸಂತೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಿಕಲಚೇತನರಿಗೆ ವಾಟರ್‌ ಬೆಡ್ಡ್, ವಾಕರ್‌ ವೀಲ್ಚೆàರ್‌, ಊರುಗೋಲುಗಳಂತಹ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾ ಗುತ್ತಿದ್ದು ಈ ಪೈಕಿ ಸೋಮವಾರಪೇಟೆ ತಾಲೋಕಿನಲ್ಲಿ 74 ಮಂದಿ ವಿಕಲಚೇತನರಿಗೆ ಸಲಕರಣೆಗಳನ್ನು ವಿತರಿಸಲಾಗಿದೆ.

Advertisement

ಅದರಂತೆ ತಾಲೂಕಿನ ಗೋಪಾಲಪುರ ಗ್ರಾಮದ ಶಿವಪ್ರಕಾಶ್‌ ಎಂಬುವರು ಕೂಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಮರದ ಕೊಂಬೆಯೊಂದು ಬಿದ್ದ ಪರಿಣಾಮ ಅವರು ಸ್ವಾದೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ ಅಲ್ಲದೆ ಅವರಿಗೆ ತಾಯಿ ಮಾತ್ರ ಆಶ್ರಯವಾಗಿದ್ದು ಹಾಗೂ ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಅವರಿಗೆ ಪ್ರತಿ ತಿಂಗಳು 750 ರು ಮಾಶಾಸನವನ್ನು ನೀಡಲಾಗುತ್ತಿದೆ. ಇದೀಗ ಅವರಿಗೆ ಧರ್ಮಸ್ಥಳ ಯೋಜನೆಯಿಂದ ನೀಡಿದ ವಾಟರ್‌ಬೆಡ್ಡ್ ಅನ್ನು ಸಫ‌ಮವಾರಪೇಟೆ ತಾಲೂಕು ಯೋಜನಾಧಿಕಾರಿ ವೈ.ಪ್ರಕಾಶ್‌ ಶಿವಪ್ರಕಾಶ್‌ ಅವರ ಮನೆಗೆ ಬಂದು ವಿತರಿಸಿದರು.
ಅನಂತರ ಅವರಿಗೆ ಸ್ವಾಂತನ ಹೇಳಿದರು. ಈ ಸಂದರ್ಭದಲ್ಲಿ ಸೋಮವಾರಪೇಟೆ ವಲಯ ಮೇಲ್ವಿಚಾರಕ ರವಿಪ್ರಸಾದ್‌ ಅಲಾಜೆ, ಸೇವಾ ಪ್ರತಿನಿಧಿ ತಾರಮಣಿ ಉಪಸ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next