Advertisement

‘ಗೋ’ಪುರದಲ್ಲಿ ಗೋಪಾಲಕೃಷ್ಣೋತ್ಸವ

12:46 PM Jun 04, 2019 | Team Udayavani |

ಉಡುಪಿ: ಶ್ರೀಕೃಷ್ಣ ಮಠದ ಸುವರ್ಣ ಗೋಪುರ ಸಮರ್ಪಣೋತ್ಸ ವದ ದಂಗವಾಗಿ ರಥಬೀದಿಯಲ್ಲಿ ರವಿವಾರ ನಡೆದ ದೇಸೀ ಗೋತಳಿಗಳ ಸಮ್ಮೇಳನದಲ್ಲಿ ಗೋಧೂಳಿ ಮುಹೂರ್ತದಲ್ಲಿ ಚಿನ್ನದ ರಥದಲ್ಲಿ ಗೋಪಾಲಕೃಷ್ಣೋತ್ಸವ ನಡೆಯಿತು. ಸಂಜೆ 6 ಗಂಟೆಗೆ ಭಜನ ಮಂಡಳಿಗಳ ಸುಮಾರು 100 ಸದಸ್ಯೆಯರ ಕೊಳಲು ವಾದನ ದೊಂದಿಗೆ ಉತ್ಸವ ಆರಂಭಗೊಂಡಿತು.

Advertisement

ಕಾಣಿಯೂರು ಮಠದಿಂದ ಪಲಿಮಾರು ಮಠದ ವರೆಗೆ ಸುಮಾರು ಮುಕ್ಕಾಲಂಶ ರಥಬೀದಿಯ ಇಕ್ಕೆಲ ಗಳಲ್ಲಿ ನಿರ್ಮಿಸಿದ ತಾತ್ಕಾಲಿಕ ಹಟ್ಟಿಯಲ್ಲಿ (ಶಾಮಿಯಾನ) ಕಟ್ಟಿದ ಸುಮಾರು 200 ಗೋವುಗಳ ನಡುವೆ ಉತ್ಸವದ ಮೆರವಣಿಗೆ ಸಾಗಿ ಬಂತು. ಮೆರವಣಿಗೆ ಮುಂದಿದ್ದ ಆನೆ ‘ಸುಭದ್ರೆ’ಯ ಹಿಂಭಾಗದಲ್ಲಿದ್ದ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಸುಗಳಿಗೆ ಗೋಗ್ರಾಸ ನೀಡಿದರು. ಪೇಜಾವರ ಕಿರಿಯ, ಕೃಷ್ಣಾಪುರ, ಸೋದೆ, ಕಾಣಿಯೂರು ಅದಮಾರು, ಅದಮಾರು ಕಿರಿಯ, ಪಲಿಮಾರು ಕಿರಿಯ, ಬಾಳೆಗಾರು ಶ್ರೀಗಳು ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next