Advertisement

ಕ್ಷೇತ್ರದಲ್ಲಿ ಗೋಪಾಲಯ್ಯ ದಂಪತಿ ಪ್ರಚಾರ

08:14 AM May 01, 2023 | Team Udayavani |

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ಕೆ. ಗೋಪಾಲಯ್ಯ ಮತ್ತವರ ಪತ್ನಿ ಹೇಮಲತಾ ಗೋಪಾಲಯ್ಯ ಕ್ಷೇತ್ರದ ವಿವಿಧ ಭಾಗಗಳಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಸಂಚರಿಸಿ ಮತಯಾಚನೆ ನಡೆಸಿದರು.

Advertisement

ಗೋಪಾಲಯ್ಯ ಮತ್ತು ಹೇಮಲತಾ ಗೋಪಾಲಯ್ಯ ಅವರು ಮನೆಮನೆ ಭೇಟಿಗೆ ನೀಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವುದರ ಜತೆಜತೆಗೆ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಚಟುವಟಿಕೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳ ಮಾಹಿತಿ, ಭವಿಷ್ಯದಲ್ಲಿ ಕೈಗೊಳ್ಳುವ ಯೋಜನೆಗಳು ಮತ್ತು ಡಬಲ್‌ ಎಂಜಿನ್‌ ಸರ್ಕಾರದಿಂದ ರಾಜ್ಯಕ್ಕೆ ಆಗುವ ಲಾಭದ ಬಗ್ಗೆ ಮತದಾರರಿಗೆ ವಿವರಣೆಗಳನ್ನು ನೀಡಿ ಕಮಲದ ಗುರುತಿಗೆ ಮತಚಲಾಯಿಸುವಂತೆ ಮನವಿ ಮಾಡಿದರು.

ಹೇಮಲತಾ ಗೋಪಾಲಯ್ಯ ಅವರು ರಾಜಾಜಿನಗರದ ಮೊದಲನೇ ಹಂತದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸಿದರು. ಅವರಿಗೆ ಮುಖಂಡ ವೆಂಕಟೇಶ್‌ ಮೂರ್ತಿ, ಗಂಗನಹನುಮಯ್ಯ, ನಾಗರತ್ನ ಲೋಕೇಶ್‌ ಸಾಥ್‌ ನೀಡಿದರು.

ಇನ್ನು ಗೋಪಾಲಯ್ಯ ಅವರು ಜೆ.ಸಿ ನಗರದಲ್ಲಿ ಮತಯಾಚನೆ ನಡೆಸಿ ಮಾತನಾಡಿ, ಕ್ಷೇತ್ರದ ಜನರಿಗೆ ಆಹಾರ ಕಿಟ್‌ ಮತ್ತು ಆರೋಗ್ಯ ಕಿಟ್‌ ಸೇರಿದಂತೆ ನೆರವು ನೀಡಿದ್ದು, ಕ್ಷೇತ್ರದ ಶಾಸಕನಾಗಿ, ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕೆ ಕೃತಜ್ಞತೆ ಅರ್ಪಿಸಿದರು.

ಮನ್‌ ಕಿ ಬಾತ್‌ ಆಲಿಸಿದ ಸಚಿವ

Advertisement

ಪ್ರಧಾನಿ ಮೋದಿಯವರ ಮನ್‌ ಕಿ ಬಾತ್‌ನ 100ನೇ ಸಂಚಿಕೆಯನ್ನು ಮಹಾಲಕ್ಷ್ಮೀ  ಲೇಔಟ್‌ ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಗೋಪಾಲಯ್ಯ ಅವರು ಕಾರ್ಯಕರ್ತರೊಂದಿಗೆ ಆಲಿಸಿದರು.

ಈ ವೇಳೆ ಬಿಜೆಪಿ ಚುನಾವಣಾ ಉಸ್ತುವಾರಿ ಇಮಾನ್‌, ರಾಘವೇಂದ್ರ ಶೆಟ್ಟಿ, ರಾಜೇಂದ್ರ ಕುಮಾರ್‌, ರೈಲ್ವೇ ನಾರಾಯಣ್‌, ಜಯಸಿಂಹ, ಅವಿನ್‌ ಆರಾಧ್ಯ, ರಾಘವೇಂದ್ರ ನಾಗರಾಜ್‌ ಸೇರಿ ಹಲವು ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next