Advertisement

ರಾಜ್ಯದಲ್ಲಿ ಗೂಂಡಾ ದರ್ಬಾರ್‌:ಶೋಭಾ ಕರಂದ್ಲಾಜೆ ಆರೋಪ

11:13 AM Apr 05, 2018 | |

ಬೆಂಗಳೂರು: ರಾಜಧಾನಿಯ ಹೊರವಲಯದಲ್ಲಿ ಬುಧವಾರ ಹಾಡಹಾಗಲೇ ಶೂಟ್‌ಔಟ್‌ ನಡೆದಿರುವುದು ರಾಜ್ಯದಲ್ಲಿ ಗೂಂಡಾ ದರ್ಬಾರ್‌ ಹೇಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ. 

Advertisement

ಹೊಸಕೋಟೆ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಗೆ ಗ್ರಾಪಂ ಮಾಜಿ ಸದಸ್ಯ ರಾಮಯ್ಯ ಎಂಬುವರ ಮೇಲೆ ಕಾಂಗ್ರೆಸ್‌ ಮುಖಂಡ ಜನಾರ್ದನ್‌ 2 ಬಾರಿ ಗುಂಡು ಹಾರಿಸಿದ್ದಾರೆ. ಜನಾರ್ದನ್‌ ಶಾಸಕ ಎಂಟಿಬಿ ನಾಗರಾಜ್‌ ಬೆಂಬಲಿಗ ಎನ್ನಲಾಗಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲ ದಂತಾಗಿದೆ. ಆಡಳಿತ ಪಕ್ಷದ ಮುಖಂಡರೇ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಚುನಾವಣಾ ವೇಳೆ ಮತದಾರರು ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿ ಮುಕ್ತ ಮತದಾನ ತೆಡೆವ ವ್ಯವಸ್ಥಿತ ಸಂಚು ನಡೆದಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next