Advertisement

ಒಳ್ಳೆ ಕೆಲಸದ ಹೆಜ್ಜೆ ಗುರುತುಗಳಿಂದಲೇ ಬಳ್ಳಾರಿ ಉಸ್ತುವಾರಿ ಸಿಕ್ಕಿದೆ : ಶ್ರೀರಾಮುಲು

03:44 PM Jan 25, 2022 | Team Udayavani |

ಬೆಂಗಳೂರು: ನನ್ನ ಒಳ್ಳೆ ಕೆಲಸದ ಹೆಜ್ಜೆ ಗುರುತುಗಳಿಂದಲೇ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯ ಅವಕಾಶ ಸಿಕ್ಜಿದೆ ಎಂದು ಸಚಿವ ಬಿ ಶ್ರೀರಾಮುಲು ಮಂಗಳವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಬಳ್ಳಾರಿ ನನಗೆ ಜನ್ಮ ಕೊಟ್ಟ ಸ್ಥಳ, ನಾನು ಅನೇಕ ಜಿಲ್ಲೆಗಳಲ್ಲೂ ಒಳ್ಳೆ ಕೆಲಸ ಮಾಡಿದ್ದೇನೆ. ನಾನು ಎಲ್ಲ ಜಿಲ್ಲೆಗಳಲ್ಲೂ ನನ್ನ ಕೆಲಸದ ಹೆಜ್ಜೆ ಗುರುತು ಗಳನ್ನು ಹಾಕಿಕೊಂಡು ಬಂದಿದ್ದೇನೆ. ಅದಕ್ಕಾಗಿ ನನಗೆ ಇವಾಗ ಬಳ್ಳಾರಿ ಉಸ್ತುವಾರಿ ನೀಡಿದ್ದಾರೆ ಎಂದರು.

ಇತ್ತೀಚೆಗೆ ನನಗೆ ಬಳ್ಳಾರಿಯಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿರಲಿಲ್ಲ, ಹಿಂದೆ ೨೦೦೬-೭ ರಲ್ಲಿ ಮಾತ್ರ ಅವಕಾಶ ಸಿಕ್ಕಿತ್ತು. ಆದರೆ ಎರಡು ತಿಂಗಳಿಗಷ್ಟೇ ಅದು ಸೀಮಿತ ಆಗಿತ್ತು ಇದೀಗ ೧೬ ವರ್ಷಗಳ ನಂತರ ಬಳ್ಳಾರಿ ಉಸ್ತುವಾರಿ ಅವಕಾಶ ಸಿಕ್ಕಿದೆ. ನಾಳೆ ಧ್ವಜಾರೋಹಣ ಮಾಡಿದ ನಂತರ ಜಿಲ್ಲೆಯಲ್ಲಿ ಕೆಲಸ ಪ್ರಾರಂಭ ಮಾಡುತ್ತೇನೆ ಎಂದರು.

ಉಸ್ತುವಾರಿ ವಹಿಸುವ ವೇಳೆ ಬಿ ಶ್ರೀರಾಮುಲು ಅವರಿಗೆ ಮಾತ್ರ ತವರು ಜಿಲ್ಲೆಯ  ಭಾಗ್ಯ ದೊರೆತಿದ್ದು, ಉಳಿದ ಯಾರಿಗೂ ತವರು ಜಿಲ್ಲೆಯ ಭಾಗ್ಯ ಸಿಕ್ಕಿಲ್ಲ ಎನ್ನುವುದು ಗಮನಾರ್ಹ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next