Advertisement

ಪೊಲೀಸ್‌ ಸಿಬಂದಿಗೆ ಸಿಹಿ ಸುದ್ದಿ : ಹುಟ್ಟುಹಬ್ಬದ ದಿನ ಪೊಲೀಸರಿಗೆ ರಜೆ !

10:00 AM Sep 15, 2019 | Team Udayavani |

ಬೆಂಗಳೂರು: ಹುಟ್ಟುಹಬ್ಬದ ದಿನದಂದು ರಜೆ ಪಡೆದು ಕುಟುಂಬದ ಸದಸ್ಯರ ಜತೆ ಕಾಲ ಕಳೆಯಲು ಸಾಧ್ಯವಾಗದೆ ಕೆಲಸದೊತ್ತಡದಿಂದ ತತ್ತರಿಸುತ್ತಿರುವ ನಗರ ಪೊಲೀಸ್‌ ಸಿಬಂದಿಗೆ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಸಿಹಿ ಸುದ್ದಿ ನೀಡಿದ್ದಾರೆ.

Advertisement

ನಗರ ಪೊಲೀಸ್‌ ಸಿಬಂದಿ ಮತ್ತು ಅಧಿಕಾರಿಗಳಿಗೆ ಅವರ ಹುಟ್ಟುಹಬ್ಬದ ದಿನದಂದು ಠಾಣಾಧಿಕಾರಿ ಅಥವಾ ಮೇಲುಸ್ತುವಾರಿ ಅಧಿಕಾರಿಗಳು ಯಾವುದೇ ಕೆಲಸದ ಒತ್ತಡವಿದ್ದರೂ ಕಡ್ಡಾಯವಾಗಿ ವಾರದ ರಜೆ ಕೊಡಬೇಕು ಎಂದು ಆದೇಶಿಸಿದ್ದಾರೆ.

ಅಷ್ಟೇ ಅಲ್ಲದೆ ಆಯುಕ್ತರ ಕಚೇರಿಯಿಂದ ಹುಟ್ಟುಹಬ್ಬದ ಶುಭಾಶಯದ ಕಾರ್ಡ್‌(ಗ್ರೀಟಿಂಗ್ಸ್‌) ಕಳುಹಿಸುವ ಕುರಿತಂತೆಯೂ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next