Advertisement

ರಾಜ್ಯ ಸರಕಾರಿ ಶಿಕ್ಷಕರು, ಉಪನ್ಯಾಸಕರ ಮೂಲ ವೇತನದಲ್ಲಿ ಬಡ್ತಿ ವಿಲೀನ

12:11 PM Oct 22, 2018 | Team Udayavani |

ಬೆಂಗಳೂರು : ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಸೆಮಿ ಫೈನಲ್‌ ಎನ್ನುವ ರೀತಿಯಲ್ಲಿ ಇದೀಗ ಎದುರಾಗಿರುವ ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಉಪ ಚುನಾವಣೆಗಳ ಹೊಸ್ತಿಲಲ್ಲಿ ನಿಂತಿರುವ ಜೆಡಿಎಸ್‌ – ಕಾಂಗ್ರೆಸ್‌ ದೋಸ್ತಿ ಸರಕಾರ, ಇದೀಗ ರಾಜ್ಯದಲ್ಲಿನ ಸರಕಾರಿ ಅನುದಾನಿತ ಪ್ರೌಢಶಾಲಾ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜುಗಳ  ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ.

Advertisement

ಅದೆಂದರೆ 2016ರ ಜೂನ್‌ 1ರಿಂದ ಜಾರಿಗೆ ಬರುವಂತೆ ಮಾಡಿದ್ದ ಒಂದು ಹೆಚ್ಚುವರಿ ವಿಶೇಷ ವೇತನ ಬಡ್ತಿಯನ್ನು ಮೂಲ ವೇತನದೊಂದಿಗೆ ವಿಲಯನಗೊಳಿಸಿ ನ.1ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. 

2016ರ ಜೂನ್‌ 1ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಲಾಗಿದ್ದ ಹೆಚ್ಚುವರಿ ವೇತನ ಬಡ್ತಿಯನ್ನು ಆರನೇ ವೇತನ ಆಯೋಗವನ್ನು ಜಾರಿ ಮಾಡುವ ವೇಳೆ ಪರ್ಸನಲ್‌ ಪೇ ಎಂದು ಪ್ರತ್ಯೇಕಿಸಲಾಗಿತ್ತು. ಸರಕಾರದ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕತವಾಗಿತ್ತು.

ಅಂತೂ ಕೊನೆಗೂ ಸರಕಾರ ಶಿಕ್ಷಕರು ಮತ್ತು ಉಪನ್ಯಾಸಕರ ಬೇಡಿಕೆಗೆ ಮಣಿದು ರಾಜ್ಯೋತ್ಸದ ಕೊಡುಗೆ ಎಂಬಂತೆ ಈಗ ಹೆಚ್ಚುವರಿ ವಿಶೇಷತನ ವೇತನ ಬಡ್ಡಿಯನ್ನು ಮೂಲ ವೇತನದೊಂದಿಗೆ ವಿಲಯನಗೊಳಿಸುವ ಆದೇಶವನ್ನು ಹೊರಡಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next