Advertisement

ಕಠಿನ ಸರಣಿಯಲ್ಲಿ ಉತ್ತಮ ನಿರ್ವಹಣೆ: ಸ್ಟೀವನ್‌ ಸ್ಮಿತ್‌

09:57 AM Feb 23, 2017 | Team Udayavani |

ಪುಣೆ: ಈ ಬಾರಿಯ ಆಸ್ಟ್ರೇಲಿಯ ತಂಡ ಭಾರತ ಪ್ರವಾಸಗೈದ ಅತ್ಯಂತ ದುರ್ಬಲ ತಂಡವೆಂಬ ಹರ್ಭಜನ್‌ ಸಿಂಗ್‌ ಅವರ ಹೇಳಿಕೆಯನ್ನು ತಳ್ಳಿ ಹಾಕಿರುವ ನಾಯಕ ಸ್ಟೀವನ್‌ ಸ್ಮಿತ್‌ ಅವರು ಪ್ರವಾಸಿ ತಂಡ “ಕಠಿನ ಸರಣಿ’ಯಲ್ಲಿ ಉತ್ತಮ ನಿರ್ವಹಣೆ ನೀಡುವಷ್ಟು ಸಮರ್ಥವಾಗಿದೆ ಎಂದು ಹೇಳಿದ್ದಾರೆ.

Advertisement

ಪ್ರತಿಯೊಬ್ಬರು ತಮ್ಮ ಅಭಿಪ್ರಾಯ ಹೇಳುವ ಹಕ್ಕು ಹೊಂದಿದ್ದಾರೆ. ಆದರೆ ನಮ್ಮದು ದುರ್ಬಲ ತಂಡವೆಂದು ನಾನು ಒಪ್ಪಿಕೊಳ್ಳುವುದಿಲ್ಲ. ಭಾರತ ವಿರುದ್ಧ ಹೋರಾಡಲು ನಾವು ಸಮರ್ಥರಿದ್ದೇವೆ ಎಂಬ ವಿಶ್ವಾಸ ನನಗಿದೆ ಎಂದು ಸ್ಮಿತ್‌ ತಿಳಿಸಿದರು.

ಇದೊಂದು ಅತ್ಯಂತ ಕಠಿನ ಸರಣಿ ಎಂಬುದರಲ್ಲಿ ಎರಡು ಮಾತಿಲ್ಲ. ಭಾರತ ಇತ್ತೀಚೆಗೆ ತವರಿನಲ್ಲಿ ಟೆಸ್ಟ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದೆ. ಹಾಗಾಗಿ ಭಾರತವನ್ನು ಎದುರಿಸಲು ಕಠಿನವಿರಬಹುದು. ಆದರೆ ಇಲ್ಲಿನ ಪರಿಸ್ಥಿತಿಯಲ್ಲಿ ಭಾರತವನ್ನು ಎದುರಿಸುವಷ್ಟು ಶಕ್ತಿ, ಸಾಮರ್ಥ್ಯ ನಮ್ಮ ತಂಡಕ್ಕಿದೆ ಎಂದು ಸ್ಮಿತ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next