Advertisement

ದತ್‌ ಬಿಡುಗಡೆ ಮಾಡಿದ್ದೇಕೆ?: ಹೈಕೋರ್ಟ್‌ ಪ್ರಶ್ನೆ

12:43 AM Jun 13, 2017 | Team Udayavani |

ಮುಂಬಯಿ: ಬಾಲಿವುಡ್‌ ನಟ ಸಂಜಯ್‌ ದತ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. 1993ರ ಸರಣಿ ಸ್ಫೋಟಕ್ಕೆ ಸಂಬಂಧಿಸಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ದತ್‌ರನ್ನು ಅಷ್ಟು ಬೇಗ ಬಂಧನ ಮುಕ್ತರನ್ನಾಗಿ ಮಾಡಿದ್ದಕ್ಕೆ ಸಮರ್ಥನೆ ನೀಡುವಂತೆ ಬಾಂಬೆ ಹೈಕೋರ್ಟ್‌ ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿದೆ. ಅಲ್ಲದೆ, ಜೈಲು ವಾಸದಲ್ಲಿದ್ದ ಹೆಚ್ಚಿನ ಸಮಯವನ್ನು ದತ್‌ ಪೆರೋಲ್‌ನಲ್ಲೇ ಕಳೆದಿದ್ದಾರೆ. ಹೀಗಿರುವಾಗ, ಅವರ ನಡತೆ ಅಷ್ಟೊಂದು ಉತ್ತಮವಾಗಿತ್ತು ಎಂದು ಹೇಗೆ ನಿರ್ಧರಿಸಿದಿರಿ ಎಂಬ ತೀಕ್ಷ್ಣ ಪ್ರಶ್ನೆಯನ್ನೂ ಕೋರ್ಟ್‌ ವ್ಯಂಗ್ಯಮಿಶ್ರಿತ ಧ್ವನಿಯಲ್ಲಿ ಕೇಳಿದೆ. ದತ್‌ಗೆ 5 ವರ್ಷ ಜೈಲು ವಿಧಿಸಲಾಗಿತ್ತು. ಆದರೆ ಶಿಕ್ಷಾವಧಿ ಪೂರ್ಣಗೊಳ್ಳುವ 8 ತಿಂಗಳ ಮುನ್ನವೇ ಸನ್ನಡತೆ ನೆಪ ಹೇಳಿ ಬಿಡುಗಡೆಗೊಳಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next