Advertisement

ಗೋಣಿಕೊಪ್ಪ: ಮಹಿಳಾ ದಸರಾ: ಆಮಂತ್ರಣ ಪತ್ರಿಕೆ ವಿತರಣೆ

12:17 AM Sep 28, 2019 | Sriram |

ಗೋಣಿಕೊಪ್ಪಲು: ಕಾವೇರಿ ದಸರಾ ಸಮಿತಿ ಆಚರಿಸುವ 41ನೇ ದಸರಾ ಜನೋತ್ಸವದ ಅಂಗವಾಗಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಕ್ಟೋಬರ್‌ 4ರಂದು ಮಹಿಳಾ ದಸರಾ ನಡೆಯಲಿದೆ ಎಂದು ಮಹಿಳಾ ದಸರಾದ ಅಧ್ಯಕ್ಷ ನೂರೇರ ರತಿ ಅಚ್ಚಪ್ಪ ಅವರು ತಿಳಿಸಿದ್ದಾರೆ.

Advertisement

ಮಹಿಳೆಯರಿಗಾಗಿ ಅಂದು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಮಹಿಳೆಯರು ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಬೆಳಿಗ್ಗೆ 10ರಿಂದ ಸಂಜೆ 5ರ ತನಕ ವಿವಿಧ ಕಾರ್ಯಕ್ರಮಗಳು ಮಹಿಳೆಯರ ಮನರಂಜಿಸಲು ಸಿದ್ದತೆಗೊಂಡಿದೆ.

ಮೆಹಂದಿ ಸ್ಪರ್ಧೆ, ಬೆಂಕಿ ಇಲ್ಲದ ಅಡುಗೆ, ಹೂವಿನ ಜೋಡಣೆ, ಜಾನಪದ ನೃತ್ಯ, ಜಾನಪದ ಗೀತೆ, ಕಣ್ಣು ಕಟ್ಟಿ ಸಂಗಾತಿಗೆ ಮೇಕಪ್‌ ಮಾಡುವುದು, ವಾಲಗತ್ತಾಟ್‌, ಪೌರಾಣಿಕ ಛದ್ಮವೇಷ, ಪಾಸಿಂಗ್‌ ದ ಬಾಲ್‌, ಸಂಗೀತ ಕುರ್ಚಿ, ಹಗ್ಗಜಗ್ಗಾಟ, ಬೆಲೂನ್‌ ಒಡೆಯುವುದು ರಂಗೋಲಿ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ 10ಗಂಟೆಗೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮಹಿಳಾ ದಸರಾದ ಅಂಗವಾಗಿ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಆಮಂತ್ರಣ ಪತ್ರ ನೀಡಿ ನಂತರ ಜಿಲ್ಲಾಧಿಕಾರಿಗೆ ಹಾಗೂ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳಿಗೆ ಮಹಿಳಾ ದಸರಾದ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುವಂತೆ ಈ ಸಂದರ್ಭ ಕರೆ ನೀಡಿದರು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ ರಾಮಕೃಷ್ಣ, ಕಾರ್ಯಧಕ್ಷ ಕೆ.ಪಿ. ಬೋಪಣ್ಣ, ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ, ಮಹಿಳಾ ದಸರಾ ಕಾರ್ಯದರ್ಶಿ ಧನಲಕ್ಷಿ¾, ಉಪಾಧ್ಯಕ್ಷ ರಾಣಿ ನಾರಯಣ, ಕಾರ್ಯಧಕ್ಷಿ ಕೊಣಿಯಂಡ ಬೋಜಮ್ಮ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next