Advertisement

ಸುವರ್ಣ ಗೋಪುರ ಸಮರ್ಪಣೆ: ವಾಹನಗಳ ಸ್ಟಿಕ್ಕರ್‌ ಅನಾವರಣ

02:00 AM Apr 28, 2019 | sudhir |

ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಮಹತ್ವಾಕಾಂಕ್ಷಿ ಯೋಜನೆಯಾದ ಶ್ರೀಕೃಷ್ಣ ದೇವರಿಗೆ ಸುವರ್ಣ ಗೋಪುರ ಸಮರ್ಪಣೆಯ ಪ್ರಯುಕ್ತ ಪ್ರಚಾರದ ಸಲುವಾಗಿ ವಾಹನಗಳಿಗೆ ಫ‌ಲಕ (ಸ್ಟಿಕ್ಕರ್‌) ಅಳವಡಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು.

Advertisement

ರಾಜಾಂಗಣದ ಬಳಿ ಸಾಂಕೇತಿಕವಾಗಿ ಸ್ಟಿಕ್ಕರ್‌ನ್ನು ಆಟೋರಿಕ್ಷಾಗಳಿಗೆ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ವಿತರಿಸಿದರು. ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ|ಎಚ್‌.ಎಸ್‌.ಬಲ್ಲಾಳ್‌, ಮೂಡಬಿದಿರೆಯ ಡಾ|ಮೋಹನ ಆಳ್ವ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಹರಿಯಪ್ಪ ಕೋಟ್ಯಾನ್‌, ಭುವನೇಂದ್ರ ಕಿದಿಯೂರು, ಯುವರಾಜ್‌ ಮಸ್ಕತ್‌, ಬಡಗಬೆಟ್ಟು ಸೊಸೈಟಿ ಜನರಲ್‌ ಮೆನೇಜರ್‌ ಇಂದ್ರಾಳಿ ಜಯಕರ ಶೆಟ್ಟಿ ಮತ್ತು ಸ್ಟಿಕ್ಕರ್‌ ಅಂಟಿಸುವಿಕೆ ಉಸ್ತುವಾರಿ ವಹಿಸಿಕೊಂಡಿರುವ ನಿತ್ಯಾನಂದ ಒಳಕಾಡು ಮೊದಲಾದವರು ಉಪಸ್ಥಿತರಿದ್ದರು. ಸುಮಾರು 3,000 ಆಟೋರಿಕ್ಷಾಗಳಿಗೆ ಸ್ಟಿಕ್ಕರ್‌ ಅಂಟಿಸುವ ಗುರಿ ಇರಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next