Advertisement

ತಿಮ್ಮಪ್ಪನಿಗೆ ಸ್ವರ್ಣ ಹಸ್ತ ಕೊಡುಗೆ ನೀಡಿದ ಚಿನ್ನಾಭರಣ ಉದ್ಯಮಿ !

07:37 PM Dec 11, 2021 | Team Udayavani |

ತಿರುಪತಿ: ತಿರುಮಲದಲ್ಲಿರುವ ಶ್ರೀವೆಂಕಟೇಶ್ವರ ದೇಗುಲಕ್ಕೆ ಅನಾಮಧೇಯ ಸ್ವರ್ಣಾಭರಣ ಉದ್ಯಮಿ 3 ಕೋಟಿ ರೂ. ಮೌಲ್ಯದ ವಜ್ರ ಖಚಿತ ಚಿನ್ನದ ಕೈಗಳನ್ನು ದೇಣಿಗೆ ನೀಡಿದ್ದಾರೆ.

Advertisement

ಶುಕ್ರವಾರ ಈ ಬೆಳವಣಿಗೆ ನಡೆದಿದೆ. ಜತೆಗೆ ತನ್ನ ಹೆಸರು ಬಹಿರಂಗ ಮಾಡುವುದೇ ಬೇಡ ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ.

ತಿರುಪತಿಯವರೇ ಆಗಿರುವ ಸ್ವರ್ಣಾಭರಣ ಉದ್ಯಮಿ ತನ್ನ ಕುಟುಂಬ ಸದಸ್ಯರೊಂದಿಗೆ ಶುಕ್ರವಾರ ದೇಗುಲಕ್ಕೆ ಆಗಮಿಸಿದ್ದ ಅವರು ವಜ್ರ ಖಚಿತವಾಗಿರುವ ಎರಡು ಹಸ್ತಗಳನ್ನು ತಿರುಪತಿ ತಿರುಮಲ ದೇವಸ್ಥಾನಮ್ಸ್‌ (ಟಿಟಿಡಿ)ನ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವೆಂಕಟ ರೆಡ್ಡಿ ಅವರಿಗೆ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ:ಅಫ್ಘಾನಿಸ್ಥಾನಕ್ಕೆ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿದ ಭಾರತ

ಅವರು ಸಲ್ಲಿಕೆ ಮಾಡಿದ ಚಿನ್ನದ ಹಸ್ತವನ್ನು ಗರ್ಭಗುಡಿಯಲ್ಲಿರುವ ಪ್ರಧಾನ ಮೂರ್ತಿಗೆ ಅಲಂಕಾರ ಮಾಡುವುದಕ್ಕೆ ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next