Advertisement

ಬಸ್ರೂರು : ಹಾಡಹಗಲೇ ಮನೆಯಿಂದ ಕಳವು

09:27 AM Jun 18, 2019 | keerthan |

ಕುಂದಾಪುರ: ಹಾಡ ಹಗಲೇ ಮನೆಯ ಹಂಚು ತೆಗೆದು ನುಗ್ಗಿದ ಕಳ್ಳರು 1.20 ಲ.ರೂ. ಹಾಗೂ 3 ಪವನ್‌ ಚಿನ್ನ ಕಳವುಗೈದ ಘಟನೆ ಬಸ್ರೂರಿನ ಕೊಲ್ಕೆರೆ ನಿವಾಸಿ ಮಹಾಲಿಂಗ ಅವರ ಮನೆಯಲ್ಲಿ ಸೋಮವಾರ ಸಂಭವಿಸಿದೆ.

Advertisement

ಮಹಾಲಿಂಗ ಅವರು ರಿಕ್ಷಾ ಚಾಲಕರಾಗಿದ್ದರು. ಪತ್ನಿ ಅಂಗನವಾಡಿ ಶಿಕ್ಷಕಿ ಹಾಗೂ ಪುತ್ರಿಯೂ ಶಿಕ್ಷಕಿಯಾಗಿದ್ದು, ಅವರೆಲ್ಲರೂ ಕೆಲಸಕ್ಕೆ ಹೋಗಿದ್ದಾಗ ಕಳವು ಮಾಡಲಾಗಿದೆ. ಮೇಲ್ನೋಟಕ್ಕೆ ಇದು ತಿಳಿದಿರುವವರ ಕೃತ್ಯವಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಕುಂದಾಪುರ ಸಿಐ ಮಂಜಪ್ಪ, ಕಂಡೂರು ಎಸ್‌ಐ ಶ್ರೀಧರ್‌ ನಾಯಕ್‌ ಹಾಗೂ ಸಿಬಂದಿ, ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next