Advertisement

Gold theft: ಮಹಿಳೆ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ದೋಚಿ ಪರಾರಿ

11:14 AM Dec 10, 2023 | Team Udayavani |

ಬೆಂಗಳೂರು: ಭವಿಷ್ಯ ಹೇಳುವುದಾಗಿ ಬುಡು ಬುಡಿಕೆ ವೇಷ ತೊಟ್ಟಿದ್ದ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ಮಂತ್ರಿ ಸಿದ ನಿಂಬೆ ಹಣ್ಣು ಕೊಟ್ಟು ಪ್ರಜ್ಞೆ ತಪ್ಪಿಸಿ ಬಳಿಕ ಆಕೆ ಮೈಮೇಲಿನ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಪರಪ್ಪನ ಅಗ್ರಹಾರದ ಹೊಸರೋಡ್‌ 14ನೇ ಕ್ರಾಸ್‌ ನಿವಾಸಿ ಕಾಂತಾ (42) ಚಿನ್ನಾಭರಣ ಕಳೆದು ಕೊಂಡವರು. ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವ ಕಾಂತಾ ಮನೆಗೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಡಿ.2ರಂದು ಬೆಳಗ್ಗೆ 9 ಗಂಟೆಗೆ ಬುಡುಬುಡಿಕೆ ವೇಷದಲ್ಲಿ ಮನೆಗೆ ಬಂದ ಅಪರಿಚಿತ ವ್ಯಕ್ತಿ, “ನಿಮ್ಮ ಮಗ ಹಾಗೂ ಗಂಡನಿಗೆ ಗಂಢಾಂತರವಿದೆ. ಅಮಾವಾಸ್ಯೆ ನಂತರ ಮೂರು ದಿನಗಳಲ್ಲಿ ಇಬ್ಬರೂ ಸಾಯುತ್ತಾರೆ’ ಎಂದು ಹೆದರಿಸಿದ್ದಾನೆ. ಅದರಿಂದ ಗಾಬರಿಗೊಂಡ ಕಾಂತಾ, ಅದಕ್ಕೆ ಪರಿಹಾರ ನೀಡುವಂತೆ ಕೋರಿದ್ದಾರೆ. ಆಗ ಆರೋಪಿ, 1,500 ರೂ. ಕೊಟ್ಟರೆ ಪರಿಹಾರ ನೀಡುವುದಾಗಿ ಹೇಳಿದ್ದaನೆ. ಅದರಂತೆ ಕಾಂತಾ ಹಣ ನೀಡಿದ್ದaರೆ. ಬಳಿಕ ಆರೋಪಿ, ಒಂದು ನಿಂಬೆಹಣ್ಣು ಕೊಡುವಂತೆ ಕೇಳಿದ್ದಾನೆ. ಆಗ ಕಾಂತಾ ನಿಂಬೆಹಣ್ಣು ತಂದು ಕೊಟ್ಟಿದ್ದಾರೆ. ಅದನ್ನು ಕೆಲ ಕ್ಷಣಗಳ ಕಾಲ ಮಂತ್ರಿಸಿ ಕಾಂತಾ ಕೈಗೆ ಕೊಟ್ಟ ಆರೋಪಿ, ನಿಂತಲ್ಲೇ ಮೂರು ಸುತ್ತು ಸುತ್ತುವಂತೆ ಹೇಳಿದ್ದಾನೆ.

ಅದರಂತೆ ಕಾಂತಾ ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಸುತ್ತು ತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಕಾಂತಾ ಮೈ ಮೇಲಿದ್ದ ಚಿನ್ನದ ಸರ ಕಸಿದುಕೊಂಡು ಆರೋಪಿ ಪರಾರಿಯಾಗಿದ್ದಾನೆ. ಕೆಲ ಹೊತ್ತಿನ ಬಳಿಕ ಕಾಂತಾ ಎಚ್ಚರಗೊಂಡಾಗ  12 ಗ್ರಾಂ  ಚಿನ್ನದ ಸರ ಇಲ್ಲದಿರುವುದು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next