Advertisement

20 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಾಣಿಕೆ ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು

10:40 AM Jul 02, 2021 | Team Udayavani |

ಮಂಗಳೂರು: ವಿದೇಶದಿಂದ ವಿಮಾನದ ಮೂಲಕ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈತನಿಂದ 20 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.

Advertisement

ಕಾಸರಗೋಡು ಮೂಲಕ ಮೊಯ್ದಿನ್ ಮುನಾಸಿರ್ ಎಂಬಾತನೇ ಚಿನ್ನ ಕಳ್ಳಸಾಗಾಣಿಕೆ ಮಾಡಿ ಸಿಕ್ಕ ಬಿದ್ದ ಪ್ರಯಾಣಿಕ. ಈತ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಿಂದ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ.

ಇದನ್ನೂ ಓದಿ:ಗಡಿ ದಾಟಿ ಬಂದ ಮತ್ತೊಂದು ಡ್ರೋನ್:  ಗುಂಡು ಹಾರಿಸಿ ಹಿಮ್ಮೆಟ್ಟಿಸಿದ ಯೋಧರು

ಅಧಿಕಾರಿಗಳ ಪರಿಶೀಲನೆ ವೇಳೆ ಈತ ಚಿನ್ನದ ಪುಡಿಯನ್ನು ಅಂಟಿ (ಗಮ್) ನಲ್ಲಿ ಮಿಶ್ರಮಾಡಿ ತನ್ನ ಗುದನಾಳದಲ್ಲಿ ಟ್ಟುಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ಆತನನ್ನು ವಶಕ್ಕೆ ಪಡೆಯಲಾಗಿದೆ. ಈತನಿಂದ 430 ಗ್ರಾಂ ನ 2 0,89,800 ರೂ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ಪ್ರವೀಣ್ ಕಂಡಿ ನೇತೃತ್ವದ ತಂಡ ಈ ಕಾರ್ಯಾಚರಣೆ ಮಾಡಿದೆ. ಕಸ್ಟಮ್ಸ್ ತಂಡದಲ್ಲಿ ರಾಕೇಶ್ ಕುಮಾರ್, ವಿಕಾಸ್ ಕುಮಾರ್, ವಿಕ್ರಮ್ ಚಕ್ರವರ್ತಿ ಇದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next