Advertisement

ಕಣ್ಣಿಗೆ ಖಾರದಪುಡಿ ಎರಚಿ ಚಿನ್ನಾಭರಣ ಕಳವು

11:22 AM Oct 20, 2022 | Team Udayavani |

ರಾಯಚೂರು: ಕಣ್ಣಿಗೆ ಖಾರದ ಎರಚಿ ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣ ಮುದಗಲ್ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿದೆ.

Advertisement

ಚಿನ್ನಾಭರಣ ವ್ಯಾಪಾರಿ ಶ್ರವಣ್ ಜೈನ್ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಚಿನ್ನಾಭರಣ ದೋಚಿದ ಖದೀಮರು ಪರಾರಿಯಾಗಿದ್ದಾರೆ.

ಇದನ್ನೂ ಓದಿ:ಜೈಲಿನಿಂದ ತಪ್ಪಿಸಿಕೊಂಡಿದ್ದ ಸಿದ್ದು ಮೂಸೆವಾಲಾ ಹತ್ಯೆ ಆರೋಪಿ ಟಿನು ಕೊನೆಗೂ ಅರೆಸ್ಟ್

ಪಟ್ಟಣದ ಲಿಂಗಸೂಗೂರು ರಸ್ತೆಯ ಕೆಇಬಿ ಮುಂಭಾಗದ ಎಂಕೆ ಜ್ಯುವೆಲರಿ ಶಾಪ್ ಮಾಲೀಕ ಶ್ರವಣ್ ಜೈನ್ ನಿತ್ಯ ರಾತ್ರಿ ಮನೆಗೆ ಆಭರಣಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ಮಾಹಿತಿ ಪಡೆದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ.

112 ಸಂಖ್ಯೆಗೆ ಕರೆ ಮಾಡಿದರೂ ತಕ್ಷಣಕ್ಕೆ ಸ್ಪಂದನೆ ಸಿಕ್ಕಿಲ್ಲ. ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next