Advertisement

Rajya Sabha Elections; “ರೆಸಾರ್ಟ್‌ಗೆ ಹೋಗುವುದು ಭೀತಿಯಿಂದಲ್ಲ’: ಸಚಿವ ಎಂ.ಬಿ.ಪಾಟೀಲ್‌

11:32 PM Feb 24, 2024 | Team Udayavani |

ಕಲಬುರಗಿ: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನ ಮತಗಳನ್ನು ಭದ್ರ ಮಾಡಿಕೊಳ್ಳುವ ನಿಟ್ಟಿನಲ್ಲಿ ರೆಸಾರ್ಟ್‌ಗೆ ಮೊರೆ ಹೋಗ ಲಾಗಿದೆಯೇ ಹೊರತು, ಅಡ್ಡ ಮತದಾನದ ಭೀತಿ ಯಿಂದಲ್ಲ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ನಮಗೆ ನಮ್ಮ ಪಕ್ಷದ ಎಲ್ಲ ಶಾಸಕರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅಡ್ಡ ಮತದಾನ ಮಾಡುವ ಭೀತಿಯಿಲ್ಲ. ಆದರೆ ಇವತ್ತಿನ ಸಂದರ್ಭದಲ್ಲಿ ಒಗ್ಗಟ್ಟಿನ ಮನೋಭಾವ ಮೂಡಲಿ, ಎಲ್ಲರೂ ಒಂದೇ ಕಡೆ ಇರಲಿ ಎನ್ನುವ ಕಾರಣ ರೆಸಾರ್ಟ್‌ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಸಮಜಾಯಿಷಿ ನೀಡಿದರು.

ಧಾರ್ಮಿಕ ಮಸೂದೆ ಮಂಡನೆಯಲ್ಲಿ ಮೇಲ್ಮನೆಯಲ್ಲಿ ಹಿನ್ನಡೆಯಾಗಿದೆಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿಚಾರಗಳಲ್ಲಿ ಭಿನ್ನತೆ ಇರುತ್ತದೆ. ಅದಕ್ಕಾಗಿ ಅವರು ತಮಗೆ ಎನಿಸಿದ್ದನ್ನು ವ್ಯಕ್ತಪಡಿಸಿದ್ದಾರೆ. ಆದರೆ ಜನರ ಹಿತದೃಷ್ಟಿಯಿಂದ ರಾಜ್ಯದ ಹಿತದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಕುರಿತು ಕ್ಯಾಬಿನೆಟ್‌ನಲ್ಲಿ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next