Advertisement

ಗೋ ಹತ್ಯೆ ಮಾಡುವುದು ನಿಲ್ಲಬೇಕು: ಕವಟಗಿಮಠ

07:36 PM Nov 05, 2021 | Team Udayavani |

ಚಿಕ್ಕೋಡಿ: ದೀಪಾವಳಿ ಹಬ್ಬದ ನಿಮಿತ್ಯ ಚಿಕ್ಕೋಡಿ ನಗರದ ಮಹಾದೇವ ಮಂದಿರದಲ್ಲಿ ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹಾಗೂ ಶಾಸಕ ಗಣೇಶ ಹುಕ್ಕೇರಿ ಗೋ ಪೂಜೆ ನೇರವೇರಿಸಿದರು.

Advertisement

ಬಳಿಕ ಮಾತನಾಡಿದ ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರು. ಗೋ ಸಂರಕ್ಷಣೆ ಮಾಡಬೇಕು ಎನ್ನುವ ದೃಷ್ಟಿಯಿಂದ ರಾಜ್ಯ ಸರಕಾರ ದೇವಸ್ಥಾನದಲ್ಲಿ ಗೋ ಪೂಜೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.

ಕೋಟ್ಯಾನು ಕೋಟಿ ದೇವತೆ ವಾಸವಾಗಿರುವ ಗೋ ಹತ್ಯೆ ಮಾಡುವುದು ನಿಲ್ಲಬೇಕು ಎಂದು ಪ್ರತಿಪಾದಿಸಿದರು.

ಶಾಸಕ ಗಣೇಶ ಹುಕ್ಕೇರಿ. ಪುರಸಭೆ ಸದಸ್ಯರಾದ ಸಾಭೀರ ಜಮಾದಾರ. ನಾಗರಾಜ ಮೇಧಾರ.ಅನಿಲ ಮಾನೆ. ಪ್ರಭಾಕರ ಕೋರೆ. ಮುಖಂಡರಾದ ವಿಶ್ವನಾಥ ಕಾಮಗೌಡ. ಸಂತೋಷ ಟವಳೆ. ಬಾಬು ಮಿರ್ಜೆ. ರವಿ ಮಾಳಿ. ಬಾಬು ಸಮ್ಮತ್ತಶೆಟ್ಟಿ.‌ಶಂಕರಯ್ಯ ಶಾಸ್ತ್ರಿ. ತಹಶೀಲ್ದಾರ ಎನ್.ಬಿ.ಗೆಜ್ಜಿ. ಮುಖ್ಯಾಧಿಕಾರಿ ಸುಂದರ ರೋಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next