Advertisement

ಕಾಶ್ಮೀರ ತಲುಪಿದ ಶೃಂಗೇರಿ ಶಾರದಾ ದೇವಿ ವಿಗ್ರಹ

09:34 PM Feb 17, 2023 | Team Udayavani |

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ತೀತ್ವಾಲ್‌ನ ಶಾರದಾ ಮಠದ ನೂತನ ದೇಗುಲದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಕರ್ನಾಟಕದ ಶೃಂಗೇರಿಯಲ್ಲಿ ತಯಾರಿಸಲಾದ ಶಾರದಾ ದೇವಿ ವಿಗ್ರಹವು ಶುಕ್ರವಾರ ಕಾಶ್ಮೀರದ ಖುಂಜ್ವಾನಿ ತಲುಪಿದೆ.

Advertisement

ಪಂಚಲೋಹದಿಂದ ತಯಾರಿಸಲಾದ ಶಾರದಾ ದೇವಿ ವಿಗ್ರಹವನ್ನು ಖುಂಜ್ವಾನಿಯ ಕಾಶ್ಮೀರಿ ಪಂಡಿತ್‌ ಸಭಾದಲ್ಲಿ ನೂರಾರು ಕಾಶ್ಮೀರಿ ಪಂಡಿತರು ಭಕ್ತಿ-ಭಾವದಿಂದ ಬರಮಾಡಿಕೊಂಡರು.

“ಕಳೆದ ತಿಂಗಳು ಶೃಂಗೇರಿಯಿಂದ ಹೊರಟ ಈ ವಿಗ್ರಹವು ಬೆಂಗಳೂರು, ಮುಂಬೈ, ಅಹಮದಾಬಾದ್‌, ಜೈಪುರ, ದೆಹಲಿ ಮತ್ತು ಅಮೃತಸರದ ಮೂಲಕ ಜಮ್ಮು ಮತ್ತು ಕಾಶ್ಮೀರ ತಲುಪಿದೆ. ಎಲ್‌ಒಸಿ ಬಳಿಯ ತೀತ್ವಾಲ್‌ನ ಶಾರದಾ ಮಠದಲ್ಲಿ ನಿರ್ಮಿಸಿರುವ ನೂತನ ದೇಗುಲದಲ್ಲಿ ಮಾ.22ರಂದು ಶಾರದಾ ದೇವಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು,’ ಎಂದು ಕಾಶ್ಮೀರದ ಶಾರದೆ ರಕ್ಷಾ ಸಮಿತಿಯ ಸಂಸ್ಥಾಪಕ ರವೀಂದ್ರ ಪಂಡಿತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next