Advertisement

ಹುಡುಗಿಯ ಕರುಣಿಸು ದೇವರೇ! ಹುಂಡಿ ಎಣಿಕೆ ವೇಳೆ ಯುವಕನೊಬ್ಬ ಬರೆದ ಪತ್ರ ಲಭ್ಯ

11:03 AM Dec 23, 2022 | Team Udayavani |

ಚಾಮರಾಜನಗರ: ನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆದಿದ್ದು, 7,61,870 ರೂ. ಸಂಗ್ರಹವಾಗಿದೆ.

Advertisement

ಇದನ್ನೂ ಓದಿ:ಉಕ್ರೇನ್ ವಿರುದ್ಧದ ಯುದ್ಧವನ್ನು ಕೊನೆಗೊಳಿಸಲು ಸಿದ್ದ, ಆದರೆ..: ಪುಟಿನ್ ಘೋಷಣೆ

ಮುಜರಾಯಿ ಇಲಾಖೆ ವ್ಯಾಪ್ತಿಯ ಚಾಮರಾಜೇಶ್ವರ ಸ್ವಾಮಿ ಹುಂಡಿ ಎಣಿಕೆ ಒಂದು ವರ್ಷದ ಬಳಿಕ ನಡೆಯಿತು. ದೇವಾಲಯದ ನವೀಕರಣ ಕಾರ್ಯದ ಬಳಿಕ ಈ ವರ್ಷ ಕುಂಭಾಭಿಷೇಕ ಹಾಗೂ ರಥೋತ್ಸವ ನಡೆದಿತ್ತು. ಹೀಗಾಗಿ 7 ಲಕ್ಷ ರೂ. ಸಂಗ್ರಹವಾಗಿದೆ. ಬ್ಯಾಂಕ್‌ ಸಿಬ್ಬಂದಿ ಎಣಿಕೆ
ಕಾರ್ಯದಲ್ಲಿ ಭಾಗವಹಿಸಿದ್ದರು.

ಹುಡುಗಿಯ ಕರುಣಿಸು ಎಂಬ ಪತ್ರ: ಹುಂಡಿ ಎಣಿಕೆ ಸಂದರ್ಭದಲ್ಲಿ ನೋಟ್‌ಬುಕ್‌ ಹಾಳೆಯಲ್ಲಿ ಬರೆದ ಪತ್ರವೊಂದು ದೊರೆತಿದ್ದು, ಓಂ ನಮಃ ಶಿವಾಯ, ನನಗೆ ಹುಡುಗಿಯ ಕರುಣಿಸು ಎಂದು ಎರಡು ಸಾಲು ಬರೆಯಲಾಗಿದೆ. ಸರಿಯಾದ ಓದು ಬರಹ ಬಾರದ ವ್ಯಕ್ತಿ ಬರೆದಂತಿದ್ದು, ತಪ್ಪು ತಪ್ಪಾಗಿ ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next