Advertisement

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

01:44 AM Apr 28, 2024 | Vishnudas Patil |

ಪಣಜಿ: ದಿನಕ್ಕೆ ಒಂದೇ ಒಂದು ಖರ್ಜೂರ ತಿನ್ನುತ್ತಾ ಉಪವಾಸ ಮಾಡುತ್ತಿದ್ದ ಗೋವಾದ ಸಹೋದರರಿಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಮೊಹಮ್ಮದ್‌ ಜುಬೇರ್‌ ಖಾನ್‌ (29), ಅಫ‌ನ್‌ ಖಾನ್‌ (27) ಎಂದು ಗುರುತಿಸಲಾಗಿದೆ.

Advertisement

ಜುಬೇರ್‌ ಮತ್ತು ಅಫ‌ನ್‌ ತಾಯಿ ರುಕ್ಸಾನಾ ಜತೆ ವಾಸವಿದ್ದರು. ಕೆಲವು ಸಮಯದಿಂದಲೂ ಈ ಉಪವಾಸ ಆಚರಿಸುತ್ತಿದ್ದರು. ವಿಚಿತ್ರ ಆಚರಣೆಗೆ ತಂದೆ ನಜೀರ್‌ ಖಾನ್‌ ಆಕ್ಷೇಪಿಸಿದ್ದಕ್ಕಾಗಿ ಅವರಿಂದಲೂ ಅಮ್ಮ ಮತ್ತು ಮಕ್ಕಳು ದೂರವಾಗಿದ್ದರು. ಈಗ ಒಂದೇ ದಿನ ಸಹೋದರರು ಮೃತಪಟ್ಟಿದ್ದು, ಅದೇ ದಿನವೇ ತಾಯಿಯೂ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಸಿವಿನಿಂದಲೇ ಜುಬೇರ್‌, ಅಫ‌ನ್‌ ಮೃತಪಟ್ಟಿರುವ ಶಂಕೆ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಪೊಲೀಸ್‌ ತನಿಖೆ ನಡೆಯುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next