Advertisement

ಬ್ಯಾಟ್ ನಿಂದ ತಲೆಗೆ ಹೊಡೆದು ಸಹೋದರಿಯನ್ನು ಕೊಲೆಗೈದ ಸಹೋದರ: ಆರೋಪಿಯನ್ನು ಬಂಧಿಸಿದ ಪೋಲಿಸರು

06:18 PM Jun 12, 2021 | Team Udayavani |

ಪಣಜಿ: ಸಹೋದರನೊಬ್ಬ ತನ್ನ ಸಹೋದರಿಯ ತಲೆಗೆ ಕ್ರಿಕೆಟ್ ಬ್ಯಾಟ್‍ನಿಂದ ಹಲ್ಲೆ ನಡೆಸಿ ಕೊಲೆಗೈದ ಪ್ರಕರಣ ಶುಕ್ರವಾರ ಸಂಜೆ ಬೆಳಕಿಗೆ ಬಂದ ನಂತರ ಗೋವಾ ಹಣಜುಣಾ ಪೋಲಿಸರು ಕರ್ನಾಟಕ ಪೋಲಿಸರ ಸಹಕಾರದೊಂದಿಗೆ ಕರ್ನಾಟಕದ ಗದಗದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಪೋಲಿಸರಿಂದ ಲಭ್ಯವಾಗಿರುವ ಮಾಹಿತಿಯ ಅನುಸಾರ- ಆರೋಪಿ ಶೇಖಪ್ಪ ಪರಸಪ್ಪ ಲಮಾಣಿ (20)  ಆರೋಪಿಯನ್ನು ಕರ್ನಾಟಕದಲ್ಲಿ ಪೋಲಿಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯವರು ವ್ಯಾಪಾರಸ್ಥರು; ಕೇಂದ್ರ ಸರ್ಕಾರ ಜನರ ರಕ್ತ ಹೀರುವ ಕಾರ್ಯ ಮಾಡುತ್ತಿದೆ- ಉಮಾಶ್ರೀ

ಆರೋಪಿ  ಹಾಗೂ ಸಹೋದರಿ ಅನುಸೂಯಾ ಲಮಾಣಿ (26) ಮತ್ತು  ತಾಯಿ ಇವರು ಗೋವಾದ ಹಣಜುಣ ಪರಿಸರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ಬುಧವಾರ ರಾತ್ರಿ ಸಹೋದರ ಸಹೋದರಿ ಇವರ ನಡುವೆ ಹಣದ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ಆರಂಭವಾಯಿತು. ಸಿಟ್ಟಿನಲ್ಲಿ ಸಹೋದರನು ಸಹೋದರಿಯ ತಲೆಗೆ ಬ್ಯಾಟ್‍ನಿಂದ ಹಲ್ಲೆ ಮಾಡಿದ ನಂತರ ಸಹೋದರಿಯ ಮೃತದೇಹವನ್ನು ರೂಂನಲ್ಲಿ ತುಂಬಿಟ್ಟು ಬಾಗಿಲಿಗೆ ಬೀಗ ಹಾಕಿ ಕರ್ನಾಟಕದ ಗದಗಕ್ಕೆ ಪಲಾಯನಗೈದಿದ್ದ. ಕಳೆದ ಕೆಲ ದಿನಗಳ ಹಿಂದಷ್ಟೇ ತನ್ನ ತಾಯಿಯನ್ನು ಗದಗಕ್ಕೆ ಕಳುಹಿಸಿಬಂದಿದ್ದ. ಇದರಿಂದಾಗಿ ಗೋವಾದ ಮನೆಯಲ್ಲಿ ಇವರಿಬ್ಬರೇ ಇದ್ದರು.

ಸಹೋದರಿಯು ಅಂಗಡಿಯೊಂದಕ್ಕೆ ಕೆಲಸಕ್ಕೆ ತೆರಳುತ್ತಿದ್ದಳು. ಇದರಿಂದಾಗಿ ಕೆಲಸಕ್ಕೆ ಬಾರದೇ ಕೆಲ ದಿನಗಳು ಕಳೆದಿದ್ದರಿಂದ ಈಕೆ ಯಾಕೆ ಬರಲಿಲ್ಲ ಎಂದು ಕೇಳಲು ಅಂಗಡಿ ಮಾಲೀಕ ಮನೆಗೆ ಬಂದರು. ಆದರೆ ಮನೆಗೆ ಬೀಗ ಹಾಕಿತ್ತು, ಮನೆಯೊಳಗಿಂದ ದುರ್ವಾಸನೆ ಬರುತ್ತಿದ್ದುದರಿಂದ ಕೂಡಲೆ ಅವರು ಪೋಲಿಸರಿಗೆ ದೂರು ನೀಡಿದರು. ಪೋಲಿಸರು ಮನೆಯ ಬೀಗ ಮುರಿದು ಒಳಗೆ ತೆರಳಿ ನೋಡಿದರೆ ಕೊಲೆಯಾದ ತರುಣಿಯ ದೇಹ ರಕ್ತದ ಓಕುಳಿಯಲ್ಲಿತ್ತು.

Advertisement

ಆರೋಪಿ ಶೇಖಪ್ಪ ಈತನು ನಿರುದ್ಯೋಗಿಯಾಗಿದ್ದು ಹಣಕ್ಕಾಗಿ ಸಹೋದರಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next