Advertisement

ಹಳೇ ಗೋವುಗಳ ಸಾಕಣೆಗೆ ರೈತರಿಗೆ ನೆರವಾಗುವ ಗೋವಾ ಸರಕಾರ

03:13 PM Jul 25, 2017 | udayavani editorial |

ಪಣಜಿ : ರೈತರಿಗೆ ತಮ್ಮ ಹಳೇ ಗೋವುಗಳನ್ನು ಸಾಕುವುದಕ್ಕೆ ಹಣಕಾಸಿನ ನೆರವು ನೀಡುವ ಯೋಜನೆಯೊಂದನ್ನು ಸರಕಾರ ಸಿದ್ಧಪಡಿಸುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಹೇಳಿದ್ದಾರೆ.

Advertisement

ಗೋವಾ ಸರಕಾರ 1978ರಷ್ಟು ಹಿಂದೆಯೇ ಗೋವಧೆಯನ್ನು ನಿಷೇಧಿಸಿ ಕಾನೂನು ರೂಪಿಸಿದ್ದು ಅದು ಜಾರಿಯಲ್ಲಿದೆ ಎಂದು ಪರ್ರೀಕರ್‌ ಹೇಳಿದರು. 

ಹಾಲು ಕೊಡದ ಹಳೇ ರಾಸುಗಳನ್ನು ಸಾಕುವುದು ಆರ್ಥಿಕವಾಗಿ ರೈತರಿಗೆ ಹೊರೆಯಾಗುವುದರಿಂದ ಸರಕಾರ ಯಾವ ರೀತಿಯಲ್ಲಿ ರೈತರಿಗೆ ನೆರವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಪ್ರತಾಪಸಿಂಹ ರಾಣೆ (ಕಾಂಗ್ರೆಸ್‌) ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಮುಖ್ಯಮಂತ್ರಿ ಪರ್ರೀಕರ್‌ ಅವರು, “ಮುಂದಿನ ಎರಡು ಮೂರು ತಿಂಗಳ ಒಳಗೆ ಸರಕಾರವು ಬೀಡಾಡಿ ಗೋವುಗಳ ವ್ಯವಸ್ಥಾಪನ ಯೋಜನೆಯನ್ನು ಜಾರಿಗೆ ತರಲಿದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next